ಮಳವಳ್ಳಿ ಹುಚ್ಚೇಗೌಡರ ಸೊಸೆ ಕಾಣೆಯಾಗಿದ್ದಾರೆ.. ಸಂಸದೆ ಸುಮಲತಾ ಬಗ್ಗೆ ಪೋಸ್ಟ್ ಹಾಕಿ ಆಕ್ರೋಶ..!

suddionenews
1 Min Read

ಮಂಡ್ಯ: ಮಳವಳ್ಳಿಯಲ್ಲಿ ಕೇವಲ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಪೋಷಕರು ಸಂಕಟದಲ್ಲಿದ್ದಾರೆ. ಇಡೀ ಊರಿಗೆ ಊರೇ ಆರೋಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪೋಷಕರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಅಂತ ಇಂಥ ಅಮಾನುಷ ಘಟನೆ ನಡೆದಾಗಲೂ ಸಂಸದೆ ಸುಮಲತಾ ಜಿಲ್ಲೆಗೆ ಬಾರದೆ ಇರುವುದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸಂಸದೆ ವಿರುದ್ಧ ಕಾಣೆಯಾಗಿದ್ದಾರೆ ಎಂದು ಪೋಸ್ಟ್ ಹೊರಡಿಸಿದ್ದಾರೆ.

ಮಳವಳ್ಳಿ ಘಟನೆ ಬಗ್ಗೆ ಸಂಸದೆ ಸುಮಲತಾ ಫೇಸ್ ಬುಕ್ ಬರೆದು ಪೋಸ್ಟ್ ಹಾಕಿದ್ದಾರೆ. ಆದರೆ ಅದಾದ ಬಳಿಕ ಮಳವಳ್ಳಿಗೆ ಭೇಟಿ ನೀಡಿಲ್ಲ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ. ಸಂಸದೆ ಸುಮಲತಾ ಕಾರ್ಯ ಫೇಸ್ ಬುಕ್ಕಿಗೆ ಸೀಮಿತವಾಯಿತಾ ಎಂದು ಆಕ್ರೋಶಗೊಂಡಿದ್ದರು. ಇನ್ನು ಕೆಲವರು ಘಟನೆ ನಡೆದು ಮೂರು ದಿನ ನಡೆದಿದೆ. ನೀವೂ ಬೇಬಿ ಬೆಟ್ಟದಲ್ಲಿಯೇ ಜಾತ್ರೆ ನೋಡುತ್ತಿದ್ದೀರಾ ಅಂತ ಗೊತ್ತು. ಫೇಸ್ ಬುಕ್ಕಿನಲ್ಲಿ ಖಂಡಿಸಿದರೆ ಸಾಲುವುದಿಲ್ಲ. ಮಂಡ್ಯಗೆ ಬನ್ನಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *