ರಾಯಚೂರಿನಲ್ಲಿ ಭತ್ತ ತುಂಬಿದ್ದ ಲಾರಿ ಪಲ್ಟಿ : ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ..!

suddionenews
1 Min Read

ರಾಯಚೂರು: ಭತ್ತ ತುಂಬಿದ ಲಾರಿ ಪಲ್ಟಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಟೈರ್ ಪಲ್ಟಿಯಾಗಿದ್ದೆ ಇದಕ್ಕೆ ಕಾರಣ ಎಂಬುದು ತಿಳಿದು ಬಂದಿದೆ. ಲಾರಿ ಪಲ್ಟಿಯಾಗಿರುವ ದೃಶ್ಯ ನೋಡಿದ್ರೆ ಎಂಥವರಿಗೂ ಮೈ ನಡುಕ ಬರುತ್ತೆ. ಡ್ರೈವರ್ ಕಥೆ ಏನಾಯ್ತೋ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬುದು ತಿಳಿದು ಬಂದಿದೆ.

ಈ ಘಟನೆ ಜಿಲ್ಲೆಯ ದುಗನೂರು ಕ್ರಾಸ್ ಬಳಿ ನಡೆದಿದೆ. ಭತ್ತದ ಚೀಲಗಳನ್ನ ಲಾರಿಯಲ್ಲಿ ಲೋಡ್ ಮಾಡಿಕೊಂಡು ಡ್ರೈವರ್ ಹೋಗಿದ್ದಾನೆ. ಆದ್ರೆ ದುಗನೂರ್ ಕ್ರಾಸ್ ಬಳಿ ಹೋಗುತ್ತಿದ್ದಂತೆ ಲಾರಿಯ ಟೈಯರ್ ಪಂಚರ್ ಆಗಿದೆ. ಪರಿಣಾಮ ಲಾರಿ ಸಂಪೂರ್ಣವಾಗಿ ಉಲ್ಟಾ ಬಿದ್ದಿದೆ.

ಲಾರಿಯಲ್ಲಿದ್ದ ಭತ್ತದ ಚೀಲಗಳು ಬಯಲಿಗೆಲ್ಲಾ ಬಿದ್ದಿದೆ. ಇನ್ನೊಂದಷ್ಟು ಚೀಲಗಳು ಲಾರಿಯಲ್ಲೇ ಇವೆ. ಆದ್ರೆ ಈ ಘಟನೆಯಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಇಡಪನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *