ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜೂನ್. 21 : ನಗರದ ತಾಲೂಕು ಕಚೇರಿ ಹಾಗೂ ಉಪಾನಂದನಾಧಿಕಾರಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಇಂದು ದಿಢೀರ್ ದಾಳಿ ಮಾಡಿ ಕಡಿತಗಳನ್ನ ಪರಿಶೀಲನೆ ಮಾಡಿದ್ದಾರೆ.
ತಾಲೂಕು ಕಚೇರಿ ಹಾಗೂ ಉಪಾನಂದನಾಧಿಕಾರಿ ಕಚೇರಿಯಲ್ಲಿ ಕಚೇರಿಯಲ್ಲಿ ಲಂಚ ಅವತಾರ ತಾಂಡವಾಡುತ್ತಿದೆ. ಸಾರ್ವಜನಿಕರಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ಇವರ ನೇತೃತ್ವದ ಲೋಕಯುಕ್ತ ಅಧಿಕಾರಿಗಳ ತಂಡ ಇಂದು ತಾಲೂಕು ಕಚೇರಿ ಹಾಗೂ ಉಪಾನಂದಾಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪ್ರತಿಯೊಂದು ಕಡತಗಳನ್ನ ಪರಿಶೀಲನೆ ಮಾಡಿದರು.
ಕಚೇರಿಯಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದ ವ್ಯವಸ್ಥೆ ಇಲ್ಲ ಎಂದು ದೂರುಗಳ ಮಳೆಗೈದಿದ್ದರು. ಲೋಕಾಯುಕ್ತ ಅಧಿಕಾರಿಗಳು ಎರಡು ಕಚೇರಿಯಲ್ಲಿ ಪ್ರತಿಯೊಂದು ಕಡತಗಳನ್ನ ಪರಿಶೀಲನೆ ಮಾಡಿದರು.
ಈ ವೇಳೆ ಲೋಕಾಯುಕ್ತ ಡಿ.ವೈ ಎಸ್ ಪಿ ಮೃತ್ಯುಂಜಯ,
ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಮುಸ್ತಾಕ್ ಅಹಮದ್, ಬಸವರಾಜ್ ಲಮಾಣಿ ಸಿಬ್ಬಂದಿಗಳಾದ ಪುಷ್ಪ, ಮಾರುತಿ, ಸತೀಶ್, ವೀರೇಶ್, ರಾಜೇಶ್, ವೆಂಕಟೇಶ್ ಕುಮಾರ್, ಶ್ರೀಪತಿ ಮತ್ತಿತರರು ಇದ್ದರು.


