ಸುಮ್ಮನೆ ಮಾತನಾಡುವುದನ್ನು ಎಚ್‌ಡಿಕೆ ಬಿಡಲಿ; ಕೇಂದ್ರ ಸಚಿವ ನಾರಾಯಣಸ್ವಾಮಿ

suddionenews
1 Min Read

ಸುದ್ದಿಒನ್, ಚಿತ್ರದುರ್ಗ, (ಅ.08) : ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅಧಿಕಾರದಲ್ಲಿದ್ದಾಗ ಒಂದು ಮಾತನಾಡೋದು ಇಲ್ಲದಾಗ ಮತ್ತೊಂದು ಮಾತನಾಡುವುದನ್ನು ಬಿಡಬೇಕೆಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಕುಮಾರಸ್ವಾಮಿ ಅವರಿಗೆ ಆರ್‌ಎಸ್‌ಎಸ್ ಬಗ್ಗೆ ಬಹುಶಃ ಸರಿಯಾಗಿ ತಿಳಿಯದ ಕಾರಣ ಈ ರೀತಿ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದರು.

ಅಧಿಕಾರದ ವ್ಯವಸ್ಥೆಯಲ್ಲಿ ಆರ್‌ಎಸ್‌ಎಸ್ ಪಾತ್ರ ಇರೋದಿಲ್ಲ. ಈಗ ಇಷ್ಟೆಲ್ಲ ಮಾತನಾಡುವವರಿಗೆ ಬಿಜೆಪಿ ಜೊತೆ ಅಧಿಕಾರ ಹಚ್ಚಿಕೊಂಡಾಗ ಇವರು ಆರ್‌ಎಸ್‌ಎಸ್ ಅಂತ ಗೊತ್ತಿರಲಿಲ್ವಾ ಎಂದು ಪ್ರಶ್ನಿಸಿದರು.

ಉತ್ತರಪ್ರದೇಶದ ಲಿಖೀಂಪುರದ ಘಟನೆ ತನಿಖೆ ಆಗಬೇಕು. ಯಾರೇ ತಪ್ಪು ಮಾಡಿದ್ದರು ಸಹ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದು ತಿಳಿಸಿದರು.

ನಿತ್ಯವು ದೇಶದಲ್ಲಿ ಐಟಿ ರೇಡ್‌ಗಳು ಆಗುತ್ತವೆ. ಮಾಜಿ ಸಿಎಂ ಬಿಎಸ್‌ವೈ ಆಪ್ತರ ಮೇಲೆ ಐಟಿ ದಾಳಿ ಬಗ್ಗೆ ಈಗಾಗಲೇ ಖುದ್ದು ಯಡಿಯೂರಪ್ಪ, ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ರಾಜಕಾರಣದ ಸಂಬಂಧ ಕಲ್ಪಿಸಬೇಡಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *