Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲಂಕೆ’ಗೀಗ ಸನಿಹವಾಗ್ತಿದೆ 75ದಿನದ ಯಶಸ್ವಿ ಪ್ರದರ್ಶನದ ಸಂಭ್ರಮ

Facebook
Twitter
Telegram
WhatsApp

 

ಬೆಂಗಳೂರು : ಗಣೇಶ ಹಬ್ಬವನ್ನ ಸಂಭ್ರಮಿಸಲು ಚಿತ್ರಪ್ರೇಮಿಗಳಿಗಾಗಿ  ರಿಲೀಸ್ ಮಾಡಲಾದ ಚಿತ್ರವೇ ಯೋಗಿಯ ಲಂಕೆ. ರಾಮ್ ಪ್ರಸಾದ್ ನಿರ್ದೇಶನದ ಈ ನೈಜ ಕಥೆಯಾಧಾರಿತ , ಲೈಂಗಿಕ ಕಾರ್ಯಕರ್ತೆಯರ ಸಮುದಾಯದಿಂದ ಬಂದ ಹುಡುಗನ ಸುತ್ತ ಕಥೆ ಹೆಣೆಯಲಾದ ಈ ಸಿನಿಮಾದ ಮೂಲಕ ಯೋಗಿ ಬಹಳ ದಿನಗಳ ಬಳಿಕ ಗ್ರ್ಯಾಂಡ್ ಕಂ ಬ್ಯಾಕ್ ಮಾಡಿದ್ರು. ಯೋಗಿಗೆ ಜತೆಯಾಗಿ ಕೃಷಿ ತಾಪಂಡ ಕೂಡ ಮಿಂಚಿದ್ದಾರೆ.

ಔಟ್ ಅಂಡ್ ಔಟ್ ಕಮರ್ಶಿಯಲ್ ಚಿತ್ರವಾಗಿರೋ ‘ಲಂಕೆ’ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದಂತೆಯೇ ಬಿಡುಗಡೆಯ ನಂತರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೌದು, ಚಿತ್ರದ ಕಥೆ, ಮೇಕಿಂಗ್, ಹಾಡುಗಳು, ನಾಯಕನ ಮಾಸ್ ಖದರ್ , ಕಮರ್ಶಿಯಲ್ ಎಳೆ  ಸೇರಿದಂತೆ  ಎಲ್ಲವನ್ನೂ  ಚಿತ್ರರಸಿಕರು ಒಪ್ಪಿ ಅಪ್ಪಿದ್ದಾಗಿದೆ. ಇದರ ಫಲವಾಗಿ ಲಂಕೆ 50 ನೇ ದಿನದ ಯಶಸ್ವಿ ಪ್ರದರ್ಶನ ಕಂಡು ಈಗ 75 ನೇ ದಿನದ ಸಂಭ್ರಮದತ್ತ ಮುಖ ಮಾಡಿ ಓಡುತ್ತಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಕಾಣೋದ್ರ ಜೊತೆಗೆ ಅತ್ಯುತ್ತಮ ಪ್ರತಿಕ್ರಿಯೆ ಗಳು ಹರಿದು ಬರ್ತಿವೆ.

ತಾರಾಗಣದಲ್ಲಿ ಗಾಯತ್ರಿ ಜೈರಾಮ್, ಕಾವ್ಯ ಶೆಟ್ಟಿ, ಸಂಚಾರಿ ವಿಜಯ್, ಎಸ್ತರ್ ನೊರೊನ್ಹಾ, ಶರತ್ ಲೋಹಿತಾಶ್ವ, ಶೋಭರಾಜ್, ಸುಚೇಂದ್ರ ಪ್ರಸಾದ್, ಡ್ಯಾನಿ ಕುಟ್ಟಪ್ಪ ಒಳಗೊಂಡಂತೆ ಸ್ಟಾರ್ ಕಲಾವಿದರ ಬಳಗವಿದೆ.ಚಿತ್ರದ ಹಾಡುಗಳು ಸಹ ಮೋಡಿಮಾಡುವಂತಿದ್ದು,  ಕಾರ್ತಿಕ್‌ ಶರ್ಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಿರಿಯ ಛಾಯಾಗ್ರಾಹಕ ರಮೇಶ್‌ ಬಾಬು ಈ ಸಿನಿಮಾಗೆ ಅದ್ಭುತ ಕ್ಯಾಮೆರಾ ವರ್ಕ್ ಮಾಡಿದ್ದು, ನಿರ್ದೇಶಕರ ಜತೆ ಸೇರಿ ಗುರುರಾಜ ದೇಸಾಯಿ ಸಂಭಾಷಣೆ, ಪಟೇಲ್‌ ಶ್ರೀನಿವಾಸ್‌ ನಾಗವಾರ ಮತ್ತು ಸುರೇಖಾ ರಾಮ್‌ಪ್ರಸಾದ್‌ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಕೊರೋನಾ ದಿಂದ ಕಂಗೆಟ್ಟಿದ್ದ ಜನತೆ ಚಿತ್ರ ಮಂದಿರಗಳತ್ತ ಮುಖ ಮಾಡ್ತಾರೋ ಇಲ್ಲವೋ ಅಂದುಕೊಂಡಿದ್ದ ಲಂಕೆ ತಂಡಕ್ಕೆ ಸಿನೆಮಾ ಯಶಸ್ಸು ಕಾಣುತ್ತಿರೋದು ಖುಷಿ ತಂದಿದ್ದು ಸಧ್ಯದಲ್ಲೇ 75 ನೇ ದಿನದ ಸಂಭ್ರಮವನ್ನೂ ತಲುಪಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದರ್ಶನ್ ರಾಜಾತಿಥ್ಯ ಫೋಟೋ ರಿವಿಲ್ ಮಾಡಿದ್ದೇ ರಾಜ್ಯ ಸರ್ಕಾರ : ಜೋಶಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು..?

  ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆಗೆ ಕೂತು ಟೀ ಕುಡೊಯುತ್ತಾ, ಸಿಗರೇಟು ಸೇದುತ್ತಾ, ನಗುಮುಖದಲ್ಲಿದ್ದ ದರ್ಶನ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಬಳಿಕವೇ ದರ್ಶನ್ ಅವರನ್ನು ಬಳ್ಳಾರಿ

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಎಂಬಿ ಪಾಟೀಲ್ : ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ..!

  ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬರ್ತಾನೆ ಇರುತ್ತದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಎಂಬ ಚರ್ಚೆಯ ಜೊತೆಗೆ ನಾನು ಕೂಡ ಸಿಎಂ ಆಗಬಹುದು ಎಂಬ ಆಸೆ

Mobile phone : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇಲ್ಲಿದೆ ಸ್ಪಷ್ಟತೆ..!

  ಸುದ್ದಿಒನ್ : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇದೀಗ ಈ ಪ್ರಶ್ನೆಗೆ WHO ಉತ್ತರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಮೊಬೈಲ್ ಫೋನ್ ಬಳಕೆಯಿಂದ

error: Content is protected !!