Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೊಸದುರ್ಗದಲ್ಲಿ ಜಮೀನು ವಿವಾದ : ಮಹಿಳೆ ಕೊಲೆ

Facebook
Twitter
Telegram
WhatsApp

ಚಿತ್ರದುರ್ಗ, (ಜೂ.29) : ಹೊಲಕ್ಕೆ ಹೋಗುವ ಕಾಲುದಾರಿ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಕೊನೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ಲಕ್ಷ್ಮಿ ದೇವರಹಳ್ಳಿ ಗ್ರಾಮದಲ್ಲಿ ಬುಧವಾರ ಇಂತಹುದೊಂದು ದಾರುಣ ಘಟನೆ ನಡೆದಿದೆ.

ಈ ಘಟನೆಯಲ್ಲಿ ಪಾಲಕ್ಷಮ್ಮ (40) ಎಂಬ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,ಆಕೆಯ ಪತಿ ಪ್ರಸನ್ನ (46) ಮಾರಣಾಂತಿಕ ಹಲ್ಲೆಗೊಳಗಾಗಿ ಎರಡು ಕೈಗಳನ್ನು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ.

ಗ್ರಾಮದಲ್ಲಿ ಪ್ರಸನ್ನ ಮತ್ತು ಪಾಲಾಕ್ಷಮ್ಮ ಅವರಿಗೆ ಸೇರಿದ ಕೃಷಿ ಜಮೀನಿನ ಮೂಲಕ ಮುಂದಿನ ಹೊಲದವರು ಇವರ ಹೊಲದ ಮೂಲಕ ಹಾದು ಹೋಗಬೇಕಿತ್ತು. ಈ ವಿಚಾರವಾಗಿ ರಾಜಣ್ಣ ಎಂಬುವವರೊಂದಿಗೆ ಕಳೆದ ಕೆಲವು ದಿನಗಳಿಂದ ಪದೇಪದೇ ಜಗಳವಾಗುತ್ತಿತ್ತು.  ಈ ವಿಚಾರವಾಗಿ

ಕಳೆದ ನಾಲ್ಕೈದು ತಿಂಗಳಿಂದ ಜಮೀನಿನಲ್ಲಿ ಹಾದು ಹೋಗಿರುವ ಕಾಲು ದಾರಿಯೂ ನಮಗೆ ಸೇರಿದ್ದು, ಅದರಲ್ಲಿ ಯಾರು ಓಡಾಡಕೂಡದು ಎಂದು ಪ್ರಸನ್ನ ಹಾಗೂ ಪತ್ನಿ ಪಾಲಾಕ್ಷಮ್ಮ ಪದೇ ಪದೇ ತಕರಾರು ತೆಗೆಯುತ್ತಿದ್ದರು. ಗಲಾಟೆ ದೊಡ್ಡದಾಗಿ ಪಾಲಾಕ್ಷಮ್ಮ ರಾಜಣ್ಣ ಮತ್ತು ಇತರರ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಆದರೆ ಬುಧವಾರ ಪ್ರಸನ್ನ ಹಾಗೂ ಪಾಲಾಕ್ಷಮ್ಮ ವಿವಾದಕ್ಕೆ ಕಾರಣವಾಗಿದ್ದ ಅದೇ ಕಾಲುದಾರಿಯಲ್ಲಿ ಬೇರೆಯವರು ಓಡಾಡದಂತೆ ತೆಂಗಿನ ಸಸಿ ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ರಾಜಣ್ಣ ಹಾಗೂ ಇನ್ನಿತರರ ನಡುವೆ ಗಲಾಟೆ ಜೋರಾಗಿದೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ರಾಜಣ್ಣ ಮತ್ತಿತರರು ಪ್ರಸನ್ನ ಹಾಗೂ ಪಾಲಾಕ್ಷಮ್ಮ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಪಾಲಾಕ್ಷಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಆಕೆಯ ಪತಿ ಪ್ರಸನ್ನ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರು ಭೇಟಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೇರಳದಲ್ಲೂ ಸಿದ್ದರಾಮಯ್ಯ ಕ್ರೇಜ್ : ಪ್ರಿಯಾಂಕ ಗಾಂಧಿ ಪರ ಪ್ರಚಾರದಲ್ಲಿ ಏನೆಲ್ಲಾ ಆಯ್ತು..?

ಸಿಎಂ ಸಿದ್ದರಾಮಯ್ಯ ಅಂದ್ರೆ ಕರ್ನಾಟಕದಲ್ಲಂತೂ ಸಿಕ್ಕಾಪಟ್ಟೆ ಕ್ರೇಜು. ಅಭಿಮಾನಿಗಳ ಬಳಗ ಕಡಿಮೆ ಏನು ಇಲ್ಲ. ಆದ್ರೆ ಸಿದ್ದರಾಮಯ್ಯ ಅವರಿಗೆ ನಮ್ಮ ರಾಜ್ಯದಲ್ಲಿ ಮಾತ್ರ ಅಭಿಮಾನಿಗಳು ಇರೋದಲ್ಲ, ಪಕ್ಕದ ರಾಜ್ಯದಲ್ಲೂ ಅಷ್ಟೇ ಅಭಿಮಾನಿಗಳಿದ್ದಾರೆ. ಕೇರಳದಲ್ಲೂ ಸಿಎಂ

ವಿಪರೀತ ಬೆನ್ನು ನೋವು : ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರಾ ದರ್ಶನ್..?

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದಾಸನಿಗೆ ಅನಾರೋಗ್ಯ ಬಿಡದೆ ಕಾಡುತ್ತಿದೆ. ಅದರಲ್ಲೂ ಬಳ್ಳಾರಿ ಜೈಲಿಗೆ ಹೋದಾಗಿನಿಂದ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದೆ. ಬೆನ್ನು ನೋವು ಎಂದು ಹೇಳಿದಾಗಿನಿಂದ ಜೈಲು ಅಧಿಕಾರಿಗಳು

ಡಾನಾ ಚಂಡಮಾರುತ ಎಫೆಕ್ಟ್ : ಹವಮಾನ ಇಲಾಖೆ ನೀಡಿದ ಎಚ್ಚರಿಕೆ ಏನು..?

ಎಲ್ಲೆಡೆ ಬೆಂಬಿಡದೆ ಮಳೆರಾಯ ಸುರಿಯುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ವಿಶ್ರಾಂತಿಯನ್ನೇ ನೀಡುತ್ತಿಲ್ಲ. ಇದರಿಂದ ಜನರು ಕೂಡ ರೋಸೆದ್ದು ಹೋಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹಾಗೂ ಒಡಿಶಾದಲ್ಲಿ ಶುರಿವಾಗಿರುವ ಚಂಡಮಾರುತದ ಪ್ರಭಾವವಾಗಿದೆ. ಚಂಡಮಾರುತ ತಗ್ಗುವ ತನಕವೂ ಈ

error: Content is protected !!