ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಹೆಬ್ಬೆಟ್ಟು ಡಿಸಿಎಂ ಅಲ್ಲ.. ದಲಿತ ಡಿಸಿಎಂ ಮಾಡುವುದಾಗಿ ಕುಮಾರಸ್ವಾಮಿ ಭರವಸೆ

1 Min Read

 

ಕೋಲಾರ: ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಜೆಡಿಎಸ್ ಪಂಚರತ್ನ ಯಾತ್ರೆ ಮುಂದುವರೆದಿದೆ. ಕೋಲಾರದಲ್ಲಿ ತನ್ನ ಪಂಚರತ್ನ ಯಾತ್ರೆಯನ್ನು ಮಾಡುತ್ತಿರುವ ಕುಮಾರಸ್ವಾಮಿ, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನೇ ಡಿಸಿಎಂ ಆಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ದಲಿತ ಸಮಾಜದ ಸಮಸ್ಯೆಗಳ ಬಗ್ಗೆ ನಾನು ನಿನ್ನೆಯೇ ಮುಕ್ತವಾಗಿ ಚರ್ಚಿಸಿದ್ದೇನೆ. ಪ್ರಾಮಾಣಿಕವಾಗಿ ದುಡಿಯುವ ದಲಿತ ಯುವಕನನ್ನೇ ಉಪಮುಖ್ಯಮಂತ್ರಿ ಮಾಡುತ್ತೇನೆ. ದಲಿತರ ಮನಸೆಳೆಯುವುದಕ್ಕೆ ನಾನು ಇದನ್ನು ಹೇಳುತ್ತಿಲ್ಲ. ಏಕಾಏಕಿ ಕುಮಾರಸ್ವಾಮಿ ದಲಿತ ಡಿಸಿಎಂ ಮಾಡುತ್ತಿದ್ದಾರೆ ಎಂದುಕೊಂಡಿದ್ದಾರೆ. ಆದ್ರೆ ಇದು ಏಕಾಏಕಿಯ ನಿರ್ಧಾರವಾಗಿಲ್ಲ.

ನಾನು ನರಸಾಪುರದಲ್ಲಿ ಕಾರ್ಯಕ್ರಮ ಮಾಡಿದಾಗ, ಅಲ್ಲಿನ ಯುವಕರಿಗೆ ಮಾತನಾಡುವುದಕ್ಕೆ ಹೇಳಿದ್ದೆ. ಆ ಯುವಕ ದಲಿತರ ಬಗೆಗಿನ ನಿರ್ಲಕ್ಷ್ಯದ ಬಗ್ಗೆ ಕೇಳಿದ. ಆಗ ನಾನು ಹೇಳಿದ್ದೇನೆ. ಹೆಬ್ಬೆಟ್ಟು ಡಿಸಿಎಂ ಮಾಡುವುದಿಲ್ಲ. ಸಂಪೂರ್ಣ ಅಧಿಕಾರ ಚಲಾಯಿಸುವ ಡಿಸಿಎಂ ಹುದ್ದೆ ನೀಡುತ್ತೇನೆ. ದಲಿತರಿಗೆ ಒಳ್ಳೆಯದ್ದು ಆಗಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *