ಮೈಸೂರಿನಲ್ಲಿ ಭಿಕ್ಷುಕನ ಮೇಲೆ ಹರಿದ KSRTC..!

suddionenews
1 Min Read

ಮೈಸೂರು: ವಿಶೇಷಚೇತನ ಭಿಕ್ಷುಕನ ಮೇಲೆ ಕೆಎಸ್ಆರ್ಟಿಸಿ ಬಸ್ ಪರಿಚಿತ ವ ಘಟನೆ ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ನಡೆದಿದೆ. ಸಾಗರೆ ಗ್ರಾಮದ ಚಿಕ್ಕಿಪುಟ್ಟ ಮೃತ ವ್ಯಕ್ತಿ. ಸರ್ಕಾರಿ ಬಸ್ ಚಾಲಕನ ಅಜಾಗರೂಕತೆಯಿಂದಾನೇ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಈ ಬಸ್ ಮೈಸೂರು ಕಡೆಗೆ ಬರುತ್ತಿತ್ತು. ಆದರೆ ಚಿಕ್ಕಿಪುಟ್ಟ ತೆವಳಿಕೊಂಡು ಭಿಕ್ಷೆ ಬೇಡುತ್ತಿದ್ದ. ಸರ್ಕಾರಿ ಬಸ್ ಚಾಲಕ ಅಜಾಗರೂಕತೆಯಿಂದ ಬಸ್ ಚಲಿಸಿದ ಪರಿಣಾಮ ಭಿಕ್ಷುಕನ ಮೇಲೆ ಬಸ್ ಹರಿದಿದೆ. ಚಿಕ್ಕಿಪುಟ್ಟನ ತಲೆ ಛಿದ್ರ ಛಿದ್ರವಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳೀಯರೆಲ್ಲ ಕಂಡಾಕ್ಟರ್ ಹಾಗೂ ಡ್ರೈವರ್ ನನ್ನು ತರಾಟೆ ತೆಗೆದುಕೊಂಡಿದ್ದಾರೆ. ಈ ಸಂಬಂಧಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *