ಮಂಡ್ಯದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ KSRTC ಬಸ್ ಅಪಘಾತ..!

suddionenews
1 Min Read

ಮಂಡ್ಯ: ಅಡ್ಡ ಬಂದ ಟ್ರ್ಯಾಕ್ಟರ್ ತಪ್ಪಿಸಲು ಹೋಗಿ, ವಿದ್ಯಾರ್ಥಿಗಳಿದ್ದ ಬಸ್ ಒಂದು ಜಮೀನಿಗೆ ನುಗ್ಗಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಾಗಿಲ್ಲ.

KSRTC ಬಸ್ ಮೇಲುಕೋಟೆಯಿಂದ ಮಂಡ್ಯದ ಕಡೆಗೆ ಹೋಗುತ್ತಿತ್ತು. ಈ ಬಸ್ ನಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚಾರ ಮಾಡುತ್ತಿದ್ದರು. ಆದರೆ ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬಂದಾಗ, ಏಕಾಏಕಿ ಎದುರುಗಡೆ ಟ್ರ್ಯಾಕ್ಟರ್ ಒಂದು ಬಂದಿದೆ. ಟ್ರ್ಯಾಕ್ಟರ್ ಅನ್ನು ತಪ್ಪಿಸಲು ಹೋಗಿ ಬಸ್ ಜಮೀನಿಗೆ ನುಗ್ಗಿದೆ.

ಕೆಎಸ್ಆರ್ಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬೇಕಿದ್ದ ದೊಡ್ಡ ಅನಾಹುತ ಕೈತಪ್ಪಿದೆ. ತಕ್ಷಣ ಜಮೀನಿಗೆ ನುಗ್ಗಿಸಿ, ಎಲ್ಲರ ಪ್ರಾಣ ಕಾಪಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಶಿವಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *