ಬೆಂಗಳೂರು: ಬೆಳಗಾವಿಯ ಅಧಿವೇಶನದಲ್ಲಿ ಈ ಸಲ ಅತಿ ಹೆಚ್ಚು ಚರ್ಚೆಯಾಗ್ತಾ ಇರುವವರು ಸಚಿವರುಗಳೇ. ನಿನ್ನೆ ಸದನದಲ್ಲಜ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುರಿತಾದ ಚರ್ಚೆಗಳೇ ನಡೆದಿತ್ತು. ಗೃಹಲಕ್ಷ್ಮೀ ಯೋಜನೆ, ಹಣದ ಬಗ್ಗೆ ವಿರೋಧ ಪಕ್ಷದ ನಾಯಕರು ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಇಂದಿನ ಅಧಿವೇಶನದಲ್ಲಿ ಮತ್ತೊಬ್ಬ ಸಚಿವರ ಕುರಿತು ಸದ್ದು ಗದ್ದಲ ಮಾಡುವುದಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಂದ್ರೆ ಸಚಿವ ಕೃಷ್ಣ ಭೈರೇಗೌಡ ಅವರ ಭೂ ವಿವಾದ ಚರ್ಚೆಗೆ ಬರುವ ಸಾಧ್ಯತೆ ಇದೆ.
ಕೃಷ್ಣ ಭೈರೇಗೌಡ ಅವರ ಭೂವಿವಾದ ಮೇಲೆ ಇಂದು ಉಭಯ ಕಲಾಪದಲ್ಲಿ ವಿಷಯವನ್ನು ಕಲಕುವುದಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ 21.16 ಎಕರೆ ಖರಾಬು ಜಮೀನು ಕಬಳಿಕೆ ಮಾಡಿದ ಆರೋಪ ಕೃಷ್ಣ ಭೈರೇಗೌಡ ಅವರ ಮೇಲೆ ಹೊರಿಸಲಾಗಿದೆ. ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್, ತಮ್ಮೇಶ್ ಗೌಡ ಅವರು ಈಗಾಗಲೇ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಲಿ ಎಂದು ಪಟ್ಟು ಹಿಡಿದಿದ್ದಾರೆ.
1978ರಲ್ಲಿ ಮಸಣದ ಜಾಗವನ್ನು ಖರಾಬು ಭೂಮಿ ಅಂತ ಇದ್ದಂತ ಜಾಗಕ್ಕೆಈಗ ಆರ್ಟಿಸಿ ತೆಗೆದು ನೋಡಿದರೆ ಕೃಷ್ಣ ಭೈರೇಗೌಡರ ಹೆಸರು ಬಂದಿದೆ. ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ. ಸ್ಮಶಾನದ ಜಾಗ ಇವರ ಹೆಸರಿಗೆ ಬರುವುದಕ್ಕೆ ಹೇಗೆ ಸಾಧ್ಯ. ಇದು ಸಂಪೂರ್ಣವಾಗಿ ಅಧಿಕಾರದ ದುರ್ಬಳಕೆಯೇ ಅಂತ ಸಾಲು ಸಾಲು ಆರೋಪಗಳನ್ನ ಬಿಜೆಪಿ ನಾಯಕರು ಮಾಡುತ್ತಾ ಇದ್ದಾರೆ. ಈ ಸಂಬಂಧ ಇಂದು ಕಲಾಪದಲ್ಲಿಯೂ ಈ ಬಗ್ಗೆ ಬಿಜೆಪಿ ನಾಯಕರು ಗದ್ದಲ ಎಬ್ಬಿಸುವ ಎಲ್ಲಾ ಸಾಧ್ಯತೆಯೂ ಇದೆ.

