ಕೋಟಿಗೊಬ್ಬ ಶೋ ರದ್ದು.. ಫ್ಯಾನ್ಸ್ ಬೇಸರ.. ಸುದೀಪ್ ಏನ್ ಹೇಳಿದ್ರು..?

suddionenews
1 Min Read

 

ಬೆಂಗಳೂರು: ಕಳೆದ ಎರಡು ವರ್ಷದಿಂದ ಕಾಯ್ತಿದ್ದಂತೆ ದಿನ ಇವತ್ತು ಬಂತಲ್ಲ ಅಂತ ಅಭಿಮಾನಿಗಳು ಖುಷಿ ಪಡ್ತಾ ಇದ್ರು.. ಕಡೆಗೂ ಕಿಚ್ಚನ ಕೋಟಿಗೊಬ್ಬ ಅವತಾರ ನೋಡ್ತೇವೆ ಅಂತ ಖುಷಿ ಪಟ್ಟಿದ್ರು.. ಆದ್ರೆ ಕಡೆ ಗಳಿಗೆಯಲ್ಲಿ ಅದೆಲ್ಲವೂ ಮಣ್ಣು ಪಾಲಾಗಿದೆ.. ಫ್ಯಾನ್ಸ್ ಗಳಿಗೆ ನಿರಾಸೆಯಾಗಿದೆ..

ಟೆಕ್ನಿಕಲ್ ಸಮಸ್ಯೆ ಅಂತ ಹೇಳಿ ಇಡೀ ರಾಜ್ಯಾದ್ಯಂತ ಶೋ ರದ್ದು ಮಾಡಲಾಗಿದೆ. ನಿನ್ನೆ ರಾತ್ರಿಯಿಂದಲೂ ಥಿಯೇಟರ್ ಹತ್ರ ಬಂದು ಕಾಯ್ತಿದ್ದಂತ ಅಭಿಮಾನಿಗಳು ಇದು ಬೇಸರ ತರಿಸಿದಂತ ವಿಚಾರವಾಗಿದೆ. ನಾವೂ ಸುದೀಪ್ ನೋಡಿಯೇ ಹೋಗ್ತೇವೆ ಅಂತ ಥಿಯೇಟರ್ ಮುಂದೆಯೆ ಫ್ಯಾನ್ಸ್ ಕುಳಿತಿದ್ದಾರೆ.

ಇದೀಗ ಈ ಎಲ್ಲಾ ಬೆಳವಣಿಗೆಯಿಂದಾಗಿ ಸುದೀಪ್ ಗೂ ನೋವಾಗಿದೆ. ಇದಕ್ಕೆ ಅಭಿಮಾನಿಗಳಿಗೆ ಸುದೀಪ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ನಿರ್ಮಾಪಕರ ನಿರ್ಲಕ್ಷ್ಯದಿಂದ ಈ ರೀತಿಯ ಸಮಸ್ಯೆಯಾಗಿದೆ. ದಯವಿಟ್ಟು ಅಭಿಮಾನಿಗಳೆಲ್ಲಾ ಕ್ಷಮಿಸಿ. ತಾಳ್ಮೆಯಿಂದಿರಿ ಎಂದು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *