ಕೊಪ್ಪಳದಲ್ಲಿ ಯುವತಿಗೆ ದೇವದಾಸಿ ಪಟ್ಟ ಕಟ್ಟಿದ ಜನ..!

suddionenews
1 Min Read

ಕೊಪ್ಪಳ: ಕೆಲವೊಂದು ಪದ್ಧತಿಗಳನ್ನು ಕಾಲ ಬದಲಾದಂತೆ ಬದಲು ಮಾಡಿಕೊಳ್ಳಲಾಗಿದೆ. ಆದರೂ ಕೆಪವೊಂದು ಕಡೆ ಅನಿಷ್ಠ ಪದ್ಧತಿಗಳು ಜೀವಂತ ಇರುವುದಕ್ಕೆ ಆಗಾಗ ಉದಾಹರಣೆಗಳು ಕಾಣಿಸುತ್ತಲೇ ಇರುತ್ತವೆ. ಇದೀಗ ಕೊಪ್ಪಳದಲ್ಲಿ ಅಂತದ್ದೇ ಪದ್ಧತಿ ಜೀವಂತವಿರುವ ಉದಾಹರಣೆ ಬೆಳಕಿಗೆ ಬಂದಿದೆ.

ಯುವತಿಯೊಬ್ಬರಿಗೆ ಅನಾರೋಗ್ಯದ ಕಾರಣದಿಂದ ದೇವರ ಶಾಪ ಇದೆ ಅಂತ ಹೇಳಿ ಯುವತಿಗೆ ದೇವದಾಸಿ ಪಟ್ಟ ಕಟ್ಟಿದ್ದಾರೆ. ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿಧಿವಿಧಾನಗಳನ್ನು ಮುಗಿಸಿ, 21 ವರ್ಷದ ಯುವತಿಗೆ ದೇವದಾಸಿ ಪಟ್ಟ ಕಟ್ಟಿದ್ದಾರೆ. ಈ ಸಂಬಂಧ ಈಗಾಗಲೇ ನಾಲ್ವರ ವಿರುದ್ಧ ಮುನಿರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಮನೂರಪ್ಪ ಮುಂದಲಮನಿ, ಹುಲಿಗೆವ್ವ ಮುಂದಲಮನಿ, ಮೂಕವ್ವ ಹರಿಜನ, ಹನುಮಪ್ಪ ಹರಿಜನ ಇವರ ಮೇಲೆ ದೂರು ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಪ್ರಾಥಮಿಕ ಹಂತದಲ್ಲಿಯೇ ಸತ್ಯ ಬಹಿರಂಗವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *