Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಮ್ರತಾ ಜೊತೆಗೆ ಮದುವೆ ಆಗಿಬಿಟ್ರಾ ಕಾರ್ತಿಕ್ : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಫೋಟೋಸ್

Facebook
Twitter
Telegram
WhatsApp

ಬಿಗ್ ಬಾಸ್ ಸೀಸನ್ 10ರಲ್ಲಿ ಕಾರ್ತಿಕ್ ಹಾಗೂ ನಮ್ರತಾ ಕೂಡ ಸ್ಪರ್ಧಿಗಳಾಗಿದ್ದರು. ಅದರಲ್ಲೂ ಆರಂಭದಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ ಇಬ್ಬರ ನಡುವೆ ಲವ್ ಇದೆ ಅಂತಾನೆ ಕರುನಾಡ ಜನತೆ, ಬಿಗ್ ಬಾಸ್ ವೀವರ್ಸ್ ಮಾತನಾಡಿಕೊಳ್ಳುತ್ತಿದ್ದರು. ಆದರೆ ಸಂಗೀತಾ ಅದನ್ನು ಬಿಗ್ ಬಾಸ್ ಮನೆಯಲ್ಲಿಯೇ ತಳ್ಳಿ ಹಾಕಿ, ಆರಂಭದಲ್ಲಿಯೇ ಕ್ಲಾರಿಟಿಯನ್ನು ಕೊಟ್ಟಿದ್ದರು. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ವ ಅಂತ.

ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಮನಸ್ತಾಪ ಬಂತು, ಕಾರ್ತಿಕ್, ನಮ್ರತಾ ಜೊತೆಗೆ ಆತ್ಮೀಯತೆಯನ್ನು ಬೆಳೆಸಿಕೊಂಡರು. ಇಬ್ಬರ ನಡುವೆ ಹೆಲ್ದಿ ಫ್ಲರ್ಟ್ ಕೂಡ ನಡೆಯುತ್ತಾ ಇತ್ತು. ಆದರೆ ನಮ್ರತಾ ಫ್ಲರ್ಟ್ ಮಾಡಬೇಡಿ ಅಂತಾನೆ ಹೇಳುತ್ತಿದ್ದರು. ಇದೀಗ ಇಬ್ಬರದ್ದು ಮದುವೆಯಾಗಿ ಹೋಗಿದೆ.

ಅದಕ್ಕೆ ಸಾಕ್ಷಿ ಎಂಬಂತೆ ನಮ್ರತಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ನಮ್ರತಾ ಮದುವೆ ಹೆಣ್ಣಿನ ಲುಕ್ ನಲ್ಲಿ ಇದ್ದರ, ಕಾರ್ತಿಕ್ ವರನ ರೀತಿ ಅಲಂಕಾರಗೊಂಡಿದ್ದಾರೆ. ಮಂಟಪದಲ್ಲಿ ಕೂತು ತಾಳಿಯನ್ನು ಕಟ್ಟಲಾಗಿದೆ, ಅರುಂಧತಿ ನಕ್ಷತ್ರವನ್ನು ತೋರಿಸಲಾಗಿದೆ. ಇದೆಲ್ಲಾ ನೋಡಿದ ಫ್ಯಾನ್ಸ್ ಒಂದು ಮಾತು ಹೇಳದೆ ಮದುವೆ ಆಗಿದ್ದಾರೆ ಎಂದು ಬೇಸರ ಹೊರ ಹಾಕಿದ್ದರೆ, ಅತ್ತ ಕಾರ್ತಿಕ್ ಕರಿಮಣಿ ಮಾಲೀಕ ನಾನಲ್ಲ ಎಂದು ಮಧುಮಗನ ಗೆಟಪ್ ನಲ್ಲಿರುವ ಫೋಟೋಗಳ ವಿಡಿಯೋ ಹಾಕಿದ್ದಾರೆ. ಆ ವಿಡಿಯೋಗಂತೂ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ.

ಬಿಗ್ ಬಾಸ್ ಫೀವರ್ ಇನ್ನು ಕಡಿಮೆಯಾಗಿಲ್ಲ. ಹಾಗೇ ಕಂಟೆಸ್ಟೆಂಟ್ ಗಳ ಕ್ರೇಜ್ ಕೂಡ ಕಡಿಮೆಯಾಗಿಲ್ಲ. ಹೀಗಾಗಿ ಇದೊಂದು ಕಂಪನಿಗಾಗಿ ಮಾಡಿರುವ ಫೋಟೋಶೂಟ್ ಎಂಬುದು ಗೊತ್ತಾಗುತ್ತಿದೆ. ಟ್ರೆಂಡಿಂಗ್ ನಲ್ಲಿರುವ ಜೋಡಿಗಳನ್ನು ಕರೆಸಿ, ಪ್ರಮೋಷನ್ ಮಾಡಿಕೊಂಡಿದ್ದಾರೆ ಅಷ್ಟೇ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊಳಲ್ಕೆರೆ | ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಸುದ್ದಿಒನ್, ಹೊಳಲ್ಕೆರೆ, ಜುಲೈ. 26 : ನಮ್ಮ ರಾಷ್ಟ್ರಧ್ವಜವು ಗಾಳಿಯಿಂದ ಹಾರುತ್ತಿಲ್ಲ ಬದಲಾಗಿ ಅದು ಹಾರುತ್ತಿರುವುದು ಈ ದೇಶಕ್ಕಾಗಿ ಮಡಿದ ವೀರ ಯೋಧರ ಸೈನಿಕರ ಉಸಿರಿನಿಂದ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ವಸಂತ್ ಹೇಳಿದರು.

ಖ್ಯಾತ ನಿರೂಪಕಿ ದಿವ್ಯಾ ಆಲೂರು ತಂದೆ‌ ನಿಧನ : ತಾವೇ ಅಂತ್ಯಸಂಸ್ಕಾರ ಮಾಡಿ ಹೇಳಿದ್ದೇನು..?

ಬೆಂಗಳೂರು : ಪೋಷಕರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಈಗಲೂ ಮನಸ್ಥಿತಿ ಎಲ್ಲಾ ಕಡೆಯಲ್ಲೂ ಬದಲಾಗಿಲ್ಲ. ತಮಗೆ ಗಂಡು ಮಕ್ಕಳು ಇಲ್ಲದೆ ಇದ್ದರು, ಅಣ್ಣತಮ್ಮಂದಿರಿಗೆ ಇರುವ ಗಂಡು ಮಕ್ಕಳಿಂದಾನೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸತ್ತವರಿಗೆ ಅಂತ್ಯ

ಖ್ಯಾತ ನಿರೂಪಕಿ ದಿವ್ಯಾ ಆಲೂರು ತಂದೆ‌ ನಿಧನ : ತಾವೇ ಅಂತ್ಯಸಂಸ್ಕಾರ ಮಾಡಿ ಹೇಳಿದ್ದೇನು..?

ಪೋಷಕರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಈಗಲೂ ಮನಸ್ಥಿತಿ ಎಲ್ಲಾ ಕಡೆಯಲ್ಲೂ ಬದಲಾಗಿಲ್ಲ. ತಮಗೆ ಗಂಡು ಮಕ್ಕಳು ಇಲ್ಲದೆ ಇದ್ದರು, ಅಣ್ಣತಮ್ಮಂದಿರಿಗೆ ಇರುವ ಗಂಡು ಮಕ್ಕಳಿಂದಾನೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡಬೇಕಾದವರು

error: Content is protected !!