ಆಂಧ್ರ ಸರ್ಕಾರಕ್ಕೆ ಆನೆಗಳನ್ನು ನೀಡಿದ ಕರ್ನಾಟಕ ಸರ್ಕಾರ : ಇದರ ಹಿಂದಿದೆ ಸಾವಿರಾರು ವರ್ಷಗಳ ಇತಿಹಾಸ..!

suddionenews
1 Min Read

ಬೆಂಗಳೂರು; ನಾವೆಲ್ಲಾ ಒಂದಷ್ಟು ವಿಚಾರಗಳನ್ನ ಇತಿಹಾಸ ಓದುವ ಮೂಲಕ ತಿಳಿದುಕೊಂಡಿದ್ದೇವೆ. ಅದರಲ್ಲಿ ಒಂದು ಆಂಧ್ರಪ್ರದೇಶದ ಸರ್ಕಾರಕ್ಕೆ ಆನೆಗಳನ್ನ ನೀಡುವುದು. ಹೌದು, ಇಂದು ನಮ್ಮ ರಾಜ್ಯ ಸರ್ಕಾರ ಆಂಧ್ರ ಪ್ರದೇಶಕ್ಕೆ ಆನೆಗಳನ್ನ ನೀಡಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಆನೆಗಳು ಬೇಕು ಅಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮನವಿಯೊಂದನ್ನ ಮಾಡಿದ್ದರು. ಆ ಮನವುಗೆ ಹೂಗೊಟ್ಟು ಇದೀಗ ಸಿದ್ದರಾಮಯ್ಯ ಸರ್ಕಾರ ಆನೆಗಳನ್ನ ನೀಡಿದೆ. ಅಷ್ಟೇ ಅಲ್ಲ ಆಂಧ್ರ ಮಾವುತರಿಗೆ ತರಬೇತಿಯನ್ನು ನೀಡಿದ್ದಾರೆ.

4 ಕುಮ್ಕಿ ಆನೆಗಳನ್ನ ನೀಡಲಾಗಿದೆ. ಆಂಧ್ರಪ್ರದೇಶದ ಕಾಡಾನೆಗಳ ನಿಯಂತ್ರಣಕ್ಕೆ ಕರ್ನಾಟಕದಿಂದ ತರಬೇತಿ ಪಡೆದಿರುವ ಕುಮ್ಕಿ ಆನಡಗಳನ್ನು ನೀಡುವಂತೆ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮನವಿ ಮಾಡಿದ್ದರಹ. ಹೀಗಾಗಿ ವಿಧಾನಸೌಧದ ಗ್ತ್ಯಾಂಡ್ ಸ್ಟೆಪ್ಸ್ ಬಳಿ ನಡರದ ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆಯೂ ನಾಲ್ಕು ಕುಮ್ಕಿ ಆನೆಗಳನ್ನ ಆಂಧ್ರಪ್ರದೇಶಕ್ಕೆ ಹಸ್ತಾಂತರ ಮಾಡಿದೆ.

ಈ ರೀತಿ ಆನೆಗಳನ್ನ ನೀಡಿರುವುದರ ಹಿಂದೆ ದೊಡ್ಡ ಇತಿಹಾಸವೇ ಅಡಗಿದೆ. 1410 ವರ್ಷಗಳ ಹಿಂದೆ ಚಾಲುಕ್ಯರ ಶ್ರೇಷ್ಠ ದೊರೆ ಇಮ್ಮಡಿ ಪುಲಿಕೇಶಿ ತನ್ನ ಸೋದರ ಕುಬ್ಜ ವಿಷ್ಣುವರ್ಧನನಿಗೆ ಆಂಧ್ರ ಪ್ರದೇಶದ ವೆಂಗಿ ಪ್ರಾಂತ್ಯವನ್ನ ನೀಡಿ, ಸ್ವತಂತ್ರ ದೊರೆಯಾಗಿ ಘೋಷಿಸಿ, ಪಟ್ಟಾಭಿಷೇಜ ಮಾಡಿದ್ದರು. ಅವತ್ತಿನಿಂದ ಕುಬ್ಜ ವಿಷ್ಣುವರ್ಧನ ವೆಂಗಿ ಚಾಲುಕ್ಯ ದೊರೆಯಾಗಿ ಅಖಂಡ ಆಂಧ್ರ ಪ್ರದೇಶವನ್ನಾಳಿದ್ದರು. ಇದೇ ಚಾಲುಕ್ಯರ ಅವಧಿಯಲ್ಲಿ ರೂಪುಗೊಂಡ ಚಾಲುಕ್ಯ ಲಿಪಿಯೇ ಬಾದಾಮಿ ಚಾಲುಕ್ಯರಿಗೂ, ವೆಂಗಿ ಚಾಲುಕ್ಯರಿಗೂ ತಾಯಿ ಲಿಪಿ ಆಗಿತ್ತು. ಆ ಲಿಪಿಯ ರೂಪಾಂತರದ ಲಿಪಿಗಳೇ ಇವತ್ತಿನ ಕನ್ನಡ ಹಾಗೂ ತೆಲುಗು ಎಂಬುದು ಭಟಷಾಂತರ ತಜ್ಞರ ಅಭಿಪ್ರಾಯವಾಗಿದೆ. ಇವತ್ತು ಇದೆಲ್ಲವನ್ನೂ ಹೇಳುವುದಕ್ಕೆ ಸಾಕ್ಷಿ ಆಗಿದ್ದು ಆನೆಗಳು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks