ಕರ್ನಾಟಕ ಬಂದ್ : ನಿರ್ಧಾರ ತಿಳಿಸದೆ ಮಕ್ಕಳಿಗೆ ಟೆನ್ಶನ್ ಕೊಡ್ತಿರೋ ಶಿಕ್ಷಣ ಇಲಾಖೆ

suddionenews
1 Min Read

ಬೆಂಗಳೂರು; ಬೆಳಗಾವಿಯಲ್ಲಿ ಮರಾಠಿಗಳ ಪುಂಡಾಟ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆ. ಹಲವು ಸಂಘಟನೆಗಳು ಕೂಡ ಬಂದ್ ಗೆ ಬೆಂಬಲ ನೀಡಿವೆ. ಇನ್ನು ಹಲವು ಸಂಘಗಳು ನೈತಿಕ ಬೆಂಬಲ ನೀಡಿವೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಮಕ್ಕಳಿಗೆ ಪರೀಕ್ಷೆಯದ್ದೇ ಚಿಂತೆಯಾಗಿದೆ.

ಪರೀಕ್ಷೆ ಅಂದರೇನೆ ಭಯ. ಅಂತದ್ರಲ್ಲಿ ಇವತ್ತು ಪರೀಕ್ಷೆ ನಡೆಯುತ್ತಾ..? ನಡೆಯಲ್ವಾ..? ಎಂಬ ಗೊಂದಲವಿದ್ದರೆ ಟೆನ್ಶನ್ ಜಾಸ್ತಿಯಾಗಿ ಓದಿದ್ದು ಮರೆತೆ ಹೋಗುತ್ತದೆ. ಸದ್ಯಕ್ಕೆ ವಿದ್ಯಾರ್ಥಿಗಳ ಪರಿಸ್ಥಿತಿ ಅದೇ ಆಗಿದೆ. ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ಕೂಡ ಶುರುವಾಗಿದೆ. ಜೊತೆಗೆ 4, 5, 6, 7ನೇ ತರಗತಿ ಮಕ್ಕಳಿಗೂ ಪರೀಕ್ಷೆಯ ಕಾಲವಾಗಿದೆ. ಇಂದು ಕೂಡ ಪರೀಕ್ಷೆ ನಿಗದಿಯಾಗಿದೆ. ಆದರೆ ಶಿಕ್ಷಣ ಇಲಾಖೆ ಬಂದ್ ಗೆ ಯಾವುದೇ ಬೆಂಬಲ ನೀಡುವ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಪರೀಕ್ಷೆಗಳು ಮಾಮೂಲಿಯಂತೆ ನಡೆಯಲಿವೆ.

ಮೂಲಗಳ ಪ್ರಕಾರ, ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪೂರ್ವ ನಿಗದಿಯಂತೆ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ. ಇಂದು ಮಧ್ಯಾಹ್ನ2 ಗಂಟೆಗೆ ನಡೆಯಬೇಕಾದ 4, 5, 6, 7 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿದೆ. ಗಣಿತ ವಿಷಯದ ಪರೀಕ್ಷೆ ಇದ್ದು, ಪ್ರತಿಭಟನೆ ತೀರಾ ಹೆಚ್ಚಾದರೆ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಿದ್ದಾರೆ‌. ಇಲ್ಲವಾದಲ್ಲಿ ಪರೀಕ್ಷೆ ಸಹಜವಾಗಿಯೇ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ಮಕ್ಕಳಾಗಲೀ, ಪೋಷಕರಾಗಲಿ ಆತಂಕಗೊಳ್ಳುವ ಅಗತ್ಯವಿಲ್ಲ. ಪರೀಕ್ಷೆ ನಡೆಯದೆ ಹೋದಲ್ಲಿ ಶಿಕ್ಷಣ ಇಲಾಖೆಯೇ ಮಾಹಿತಿ ನೀಡಲಿದೆ. ಯಾವುದೇ ಮಾಹಿತಿ ಇಲ್ಲ ಎಂದಾದಲ್ಲಿ ಮಕ್ಕಳನ್ನ ಪರೀಕ್ಷೆಗೆ ತಯಾರು ಮಾಡಿ.

Share This Article
Leave a Comment

Leave a Reply

Your email address will not be published. Required fields are marked *