ಹನಿ ನೀರು ತಮಿಳುನಾಡಿಗೆ ಹೋಗದಂತೆ ಮಾಡುವ ತಾಕತ್ತು ಕನ್ನಡಿಗರಿಗೆ ಇದೆ : ಪೂಜಾ ಗಾಂಧಿ

1 Min Read

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವ ವಿಚಾರಕ್ಕೆ ಇಂದು ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ರಾಜ್ಯಾದ್ಯಂತ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಕನ್ನಡ ಚಿತ್ರರಂಗ ಕೂಡ ಕಾವೇರಿಗಾಗಿ ಕೈ ಜೋಡಿಸಿದೆ. ಹಲವಾರು ಕಲಾವಿದರು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಈ ವೇಳೆ ನಟಿ ಪೂಜಾಗಾಂಧಿ ಮಾತನಾಡಿದ್ದು, ಕನ್ನಡಿಗರನ್ನು ಕೆಣಕಿದರೆ ಹುಷಾರ್. ಒಂದು ಹನಿ‌ನೀರನ್ನು ತಮಿಳುನಾಡಿಗೆ ಬಿಡದಂತೆ ಮಾಡುವ ತಾಕತ್ತು ಕನ್ನಡಿಗರಿಗೆ ಇದೆ. ಸುಮಾರು ಹನ್ನೆರಡು ವರ್ಷದ ಹಿಂದೆ ಇಲ್ಲೆ ಒಂದು ಹೋರಾಟದಲ್ಲಿ ಭಾಗಿಯಾಗಿದ್ದೆವು. ಕನ್ನಡಿಗರಿಗೆ ಸಹನೆ ಇದೆ. ಆದರೆ ಪರೀಕ್ಷೆ ಮಾಡುವುದಕ್ಕೆ ಹೋಗಬೇಡಿ. ನಮ್ಮ ಕರ್ನಾಟಕ ಸರ್ಕಾರ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು. ನಮ್ಮ ರೈತರಿಗೆ ಏನಾದರೂ ಆಗಲಿ, ತಮಿಳುನಾಡು ರೈತರು ಮಾತ್ರ ಚೆನ್ನಾಗಿರಲಿ ಎಂದು ನಮ್ಮನ್ನು ಕೆಣಕಿದರೆ ಸುಮ್ಮನೆ ಇರುವುದಿಲ್ಲ.

ಬೆಳ್ಳಿಯ ಬಾಗಿಲು, ಚಿನ್ನದ ದೇಗುಲ ಒಳಗಡೆ ಬಹು ಮುತ್ತುರತ್ನ. ಬೀಗದ ಕೈತಂದು ಬಾಗಿಲನ್ನು ತೆರೆಯಲು ನೀನೊಮ್ಮೆ ಪ್ರಯತ್ನ ಮಾಡು. ಎಲ್ಲಾ ಖಜಾನೆಗಳಿಗೆ ಒಂದು ಬೀಗದ ಕೈ ಇರುವಂತೆ ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೆ ಇರುತ್ತೆ ಎಂದು ಪೂಜಾ ಗಾಂಧಿ ಕವಿ ಪರಮೇಶ್ವರ ಭಟ್ ಅವರ ಮಾತುಗಳನ್ನು ಹೇಳಿದ್ದಾರೆ. ಹಾಗೇ ಇನ್ನು ಮುಂದೆ ಒಳ್ಳೆಯ ಮಳೆಯಾಗಲಿ. ಎರಡು ರಾಜ್ಯದ ರೈತರಿಗೆ ಒಳೀತಾಗಲಿ ಎಂದೇ ಬಯಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *