ಕನ್ನಡಿಗರು, ಮರಾಠಿಗರು ಸೌಹಾರ್ದಯುತವಾಗಿದ್ದಾರೆ : ಆರಗ ಜ್ಞಾನೇಂದ್ರ

suddionenews
1 Min Read

ಬೆಳಗಾವಿ : ಎಂಇಎಸ್ ಪುಂಡರ ಅವಾಂತರದಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿನೆಯನ್ನೇ ವಿಕೃತಿಗೊಳಿಸಿದ್ದಾರೆ. ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ, ಬೆಳಗಾವಿಯಲ್ಲಿ ಏನು ಆಗಿಲ್ಲ ಜಿಲ್ಲೆ ಶಾಂತವಾಗಿದೆ ಎಂದಿದ್ದಾರೆ.

 

ಜಿಲ್ಲೆಯಲ್ಲಿ ಮಾತನಾಡಿದ ಅವರು, ಕನ್ನಡಿಗರು, ಮರಾಠಿಗರು ಸೌಹಾರ್ದಯುತವಾಗಿದ್ದಾರೆ. ಜಿಲ್ಲೆಯಲ್ಲಿ ಏನೂ ಆಗಿಲ್ಲ. ಕನ್ನಡ ಪರ ಸಂಘಟನೆಗಳು ಶಾಂತಯುತವಾಗಿ ಪ್ರತಿಭಟನೆ ನಡೆಸಲಿ ಎಂದಿದ್ದಾರೆ. ಎಂಇಎಸ್ ನ ನಡವಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ.

ಇಂದು ಬೆಳಗಾವಿಗೂ ತೆರಳಿದ್ದರು. ಈ ಸಂಬಂಧ ಮಾತನಾಡಿರುವ ಸಚಿವ ಆರಗ ಜ್ಞಾನೇಂದ್ರ, ಎಂಇಎಸ್ ಸಂಘಟನೆಯನ್ನ ಜನ ಬ್ಯಾನ್ ಮಾಡಿದ್ದಾರೆ. ಬ್ಯಾನ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *