ಅನಾರೋಗ್ಯದಿಂದ ನಿಧನರಾದ ನಟ ಲೋಹಿತಾಶ್ವ ಪ್ರಾಧ್ಯಾಪಕರಾಗಿದ್ದವರು ನಟನೆಗೆ ಬಂದಿದ್ದು ಹೇಗೆ..?

suddionenews
1 Min Read

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ನಿಧನರಾಗಿದ್ದಾರೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ಒಂದು ತಿಂಗಳಿನಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಲೋಹಿತಾಶ್ವ ಮೂಲತಃ ತುಮಕೂರಿನ ತೊಂಡಗೆರೆ ಗ್ರಾಮದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದವರು. ಪ್ರಾಧ್ಯಾಪಕರಾಗಿಯೇ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ ನಾಟಕ, ಧಾರಾವಾಹಿ, ಸಿನಿಮಾ ಅಂತ ನಟನೆ ಕಡೆಗೆ ಬಂದವರು. ಸದ್ಯ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಲೋಹಿತಾಶ್ವ ಅವರು ಮೊದಲು ಗೀತಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಗೀತಾ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದ ಅವರು ಶಂಕರ್ ನಾಗ್ ಸಿನಿಮಾಗಳಲ್ಲಿ ಖಾಯಂ ನಟರಾಗಿದ್ದರು. ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಂತ ನಟ. ಸ್ವಂತ ಊರಿನಲ್ಲಿ ಕೃಷಿಯನ್ನು ಮಾಡಿದ್ದರು. ನಾಳೆ ಇವರ ಅಂತ್ಯಕ್ರಿಯೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *