in ,

ಕನ್ನಡ ಸಾಹಿತ್ಯ ಪರಿಷತ್ತು ಜನತಾ ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತಿದೆ : ಬಿ.ರಾಜಶೇಖರಪ್ಪ

suddione whatsapp group join

ಚಿತ್ರದುರ್ಗ, (ಮೇ.05) : ಕನ್ನಡ ಸಾಹಿತ್ಯ ಪರಿಷತ್ತು ಜನತಾ ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಖ್ಯಾತ ಇತಿಹಾಸ  ಸಂಶೋಧಕ ಬಿ.ರಾಜಶೇಖರಪ್ಪ ಹೇಳಿದ್ದಾರೆ.

ಅವರು ಗುರುವಾರ ನಗರದ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 109 ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರಿನಿಂದ ರಾಜ್ಯದಲ್ಲಿನ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡದ ಪರಿಸರವನ್ನು ಸಂಸ್ಥೆ ಬೆಳೆಸುತ್ತಿದೆ. ಸ್ಥಳೀಯ ಸಾಹಿತಿಗಳು, ಲೇಖಕರಿಗೆ ಅವಕಾಶಗಳನ್ನು ಸಂಸ್ಥೆ ನೀಡಿದೆ.  ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ನಾನಾ ಪ್ರಮುಖರಿಂದ ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಆರಂಭವಾಯಿತು. ಬಿ.ಎಂ.ಶ್ರೀಕಂಠಯ್ಯ, ಡಿ.ವಿ.ಗುಂಡಪ್ಪ, ಶಿವಮೂರ್ತಿ ಶಾಸ್ತ್ರಿಗಳು,ಎಂ.ಆರ್.ಶ್ರೀನಿವಾಸ ಮೂರ್ತಿ ಸೇರಿದಂತೆ ಪ್ರಮುಖ ಸಾಹಿತ್ಯ ಸೇವಕರು ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ.

ಬಿ.ಎಂ.ಶ್ರೀಕಂಠಯ್ಯ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಭಾಷೆ, ಸಂಗೀತ, ಕಲೆಗಳಿಗೆ ಪರಿಷತ್ತು ಅವಕಾಶ ನೀಡಬೇಕು ಎಂಬ ಕಳಕಳಿಯನ್ನು ಹೊಂದಿದ್ದು. ಇತರೆ ಭಾಷೆಗಳ ಜನರು ಇಂಥಹ ಸಂಸ್ಥೆ ನಮ್ಮ ಭಾಷೆಯಲ್ಲಿಯೂ ಇರಬೇಕು ಎನ್ನುವಷ್ಟರ ಮಟ್ಟಿಗೆ ಸಂಸ್ಥೆ ಬೆಳೆದಿದೆ. ಸಾಹಿತ್ಯ ಪರಿಷತ್ತು ಮುದ್ರಿಸಿ, ಪ್ರಕಟಿಸಿರುವ ನಿಘಂಟು ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ.  ಎಂದರು.

ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ಭಾಷೆಯ ಬಗ್ಗೆ ಪೋಷಕರ ವ್ಯಾಮೋಹ ಹೆಚ್ಚಾಗಿದೆ. ಆದ್ದರಿಂದ ಕನ್ನಡ ಕಲಿಕೆಗೆ ತೊಂದರೆಯಾಗಿದೆ. ಕನ್ನಡ ಶಾಲೆಗಳು ಉಳಿಯುವಿಕೆ ಅಗತ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳನ್ನು ಉನ್ನತೀರಿಸುವ ಅವಶ್ಯಕತೆಯಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಪ್ಪಿಲ್ಲದಂತೆ ಓದುವ, ಬರೆಯುವ ಮತ್ತು ಉಚ್ಚಾರಣೆ ಮಾಡುವುದನ್ನು ಕಲಿಯುವುದು ಇಂದಿನ ಅಗತ್ಯವಾಗಿದೆ. ಅನ್ಯ ಭಾಷಿಕರಿಗೆ ಕನ್ನಡದ ಅಭಿಮಾನ ಹೆಚ್ಚಾಗಿದೆ. ಆದರೆ ಕನ್ನಡಿಗರಾದ ನಾವು ಭಾಷೆಯನ್ನು ಪ್ರೀತಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಭಾಷೆಯನ್ನು ಹೆಚ್ಚು ಬಳಸಿದಂತೆ ಭಾಷೆಯ ಬೆಳವಣಿಗೆಯಾಗುತ್ತದೆ. ಸಾಹಿತ್ಯ ಪರಿಷತ್ತು ದೇಶದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಕನ್ನಡಿಗರಾದ ನಾವು ಮಾತು ಮತ್ತು ಬರವಣೆಗೆಯಲ್ಲಿ ಕನ್ನಡದ ಪದಗಳನ್ನು ಹೆಚ್ಚಾಗಿ ಬಳಸುವುದನ್ನು ರೂಢಿಸಿಕೊಳ್ಳುವುದು ಅಗತ್ಯ. ಕನ್ನಡ,ಕನ್ನಡಿಗ ಮತ್ತು ಕರ್ನಾಟಕದ ಸಾಹಿತ್ಯದ ಬೆಳವಣಿಗೆಗೆ ಕಸಾಪ ಶ್ರಮಿಸುತ್ತಿದೆ ಎಂದರು.

ಜಿಲ್ಲಾ ಕಸಾಪದ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಭಾಷೆಯು ನಮ್ಮ ನಾಡಿನ ಸಂಸ್ಕøತಿಯನ್ನು ಮುನ್ನಡೆಸುವ ಪ್ರಬಲ ಸಾಧನವಾಗಿದೆ. ಭಾಷೆಯ ಉಳಿವಿಗೆ ಶಿಕ್ಷಕರ ಕೊಡುಗೆ ಹೆಚ್ಚಿನ ಪ್ರಮಾಣದಲ್ಲಿದೆ. ಕಸಾಪ ಮಾಜಿ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಜೆ.ಬಸವರಾಜಪ್ಪ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಸಿ.ಲೋಕೇಶ್, ಸಂಚಾಲಕ ಶ್ರೀನಿವಾಸ ಮಳಲಿ, ಗಡಾರಿ ಕೃಷ್ಣಪ್ಪ, ಮಲ್ಲಿಕಾರ್ಜುನ, ಮುಖ್ಯಶಿಕ್ಷಕ ಸಿ.ರಂಗನಾಯ್ಕ, ಡಾ. ಯಶೋಧ ರಾಜಶೇಖರಪ್ಪ ಪ್ರಶಿಕ್ಷಣಾರ್ಥಿಗಳಾದ ಲಕ್ಷ್ಮಿ.ಎಂ, ಸೌಮ್ಯ ಟಿ.ಜಿ, ಅರ್ಪಿತ, ನಿರ್ಮಲ, ಕೃಷ್ಣ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ ಕನ್ನಡಗೀತ ಗಾಯನ ನೆರವೇರಿಸಿದರು. ಉಪನ್ಯಾಸಕ ಪಾತಲಿಂಗಪ್ಪ ಸ್ವಾಗತಿಸಿದರು, ಏಳಂಜಿ ಕಾಡಪ್ಪ ನಿರೂಪಿಸಿದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮುಂದೂಡಿ :  ಕುಮಾರಸ್ವಾಮಿ

ಸರ್ಕಾರಿ ಕೆಲಸ ಬಿಡಿಸಿ, ಎಲೆಕ್ಷನ್ ಗೆ ನಿಲ್ಲಿಸಿ ಸೋಲಿಸಿದ್ದರು : ದೇವೇಗೌಡರ ಬಗ್ಗೆ ಮಾತನಾಡಿದ ನಟ ಶ್ರೀನಿವಾಸ್ ಮೂರ್ತಿ