ಕಾಂಗ್ರೆಸ್ ನವರದ್ದು ಬರೀ ಗಿಣಿ ಭವಿಷ್ಯ : ಸಚಿವ ಈಶ್ವರಪ್ಪ

suddionenews
1 Min Read

ಬಾಗಲಕೋಟೆ: ಬಿಜೆಪಿಯವರು ಎಷ್ಟು ಜನ ಬರ್ತಾರೆ..? ಯಾವಾಗ ಬರ್ತಾರೆ ಎಂಬುದನ್ನ ಹೇಳಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅವರ ಮಾತಿಗೆ ಇದೀಗ ಸಚಿವ ಈಶ್ವರಪ್ಪ ಟಾಂಗ್ ಕೊಟ್ಟಿದ್ದು, ಅವರದ್ದು ಬರೀ ಗಿಣಿ ಭವಿಷ್ಯ ಎಂದು ಕುಹಕವಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿರುವ ಶಾಸಕರು ಸಿಂಹದ ಮರಿಗಳಿದ್ದಂತೆ. ಯಾರೂ ಕೂಡ ಕಾಂಗ್ರೆಸ್ ಗೆ ಹೋಗಲ್ಲ. ಡಿ ಕೆ ಶಿವಕುಮಾರ್ ಅವರು ಗಿಣಿ ಭವಿಷ್ಯದಲ್ಲಿ ಸ್ಪರ್ಧೆ ನಡೆಸ್ತಾ ಇದ್ದಾರೆ. ಒಬ್ಬ ಶಾಸಕರು ಕೂಡ ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಬಿಜೆಪಿ ಶಾಸಕರಲ್ಲ ಕಾಂಗ್ರೆಸ್ ಬಿಟ್ಟು ಒಬ್ಬೊಬ್ಬರೇ ಹೋಗ್ತಾ ಇರ್ತಾರೆ. ಸಿ ಎಂ ಇಬ್ರಾಹಿಂ ಅಂತವ್ರೇ ಬಿಟ್ಟು ಬರ್ತಿದ್ದಾರೆ. ಅವರ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಆಗಿಲ್ಲ ಅವರಿಗೆ. ಮೊದಲು ಅವರ ಶಾಸಕರನ್ನ ಉಳಿಸಿಕೊಳ್ಳಲಿ. ಹೇಳಿದ ತಕ್ಷಣ ಪಕ್ಷ ಬಿಟ್ಟು ಹೋಗ್ತಾರೇನು. ಯತ್ನಾಳ್ ಅವರು ಹೋಗೋದು ಬಿಡೋದು ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *