ಸುಮ್ಮನೆ ಕಾಂಗ್ರೆಸ್ ನವರು ಗೊಂದಲ ಸೃಷ್ಟಿಸುತ್ತಿದ್ದಾರೆ : ಮಾಜಿ ಸಚಿವ ಈಶ್ವರಪ್ಪ

suddionenews
1 Min Read

ಶಿವಮೊಗ್ಗ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಆಗಾಗ ಸುದ್ದಿಯಾಗಿ ತಣ್ಣಗಾಗುವ ವಿಚಾರ ಎಂದರೆ ಅದು ನಾಯಕತ್ವ ಬದಲಾವಣೆಯ ವಿಚಾರ. ಇದೀಗ ಈ ವಿಚಾರಕ್ಕೆ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ನಾಯಜತ್ವ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ನವರು ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ.

ಚುನಾವಣೆ ಮುಗಿಯುವವರೆಗೂ ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ. ಕಾಂಗ್ರೆಸ್ ನವರು ಸುಮ್ಮನೆ ಹೇಳುತ್ತಾರೆ ಎಂದಿದ್ದಾರೆ. ಇನ್ನು ಇದೇ ವೇಳೆ ಪಠ್ಯ ಪುಸ್ತಕದ ವಿಚಾರವಾಗಿ ಮಾತನಾಡಿ, ಹಡ್ಗೇವಾರ್ ಅವರ ಪಠ್ಯವನ್ನು ಪುಸ್ತಕದಲ್ಲಿ ಸೇರಿಸಿದರೆ ಕಾಂಗ್ರೆಸ್ ನವರಿಗೇಕೆ ಹೊಟ್ಟೆ ಉರಿ. ವ್ಯಕ್ತಿತ್ವದ ಬಗ್ಗೆ ನಾವೂ ಪಠ್ಯಪುಸ್ತಕದಲ್ಲಿ ಸೇರಿಸುತ್ತಿದ್ದೇವೆ. ಭಗತ್ ಸಿಂಗ್, ನಾರಾಯಣ ಗುರು ಅವರ ಪಠ್ಯವನ್ನು ನಾವೂ ತೆಗೆಯುವುದಿಲ್ಲ. ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡಿತ್ತಿರುವ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ರಾಷ್ಟ್ರದ್ರೋಹಿಗಳು ಎಂದಿದ್ದಾರೆ.

ಇನ್ನು ಎಲ್ಲೆಡೆ ಮಳೆಯಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯಾದ ಬಗ್ಗೆ ಮಾತನಾಡಿ, ಮೊನ್ನೆ ನಾಲ್ಕು ಪಟ್ಟು ಮಳೆಯಾಗಿದೆ. ನಗರದಲ್ಲಿ ಅನೇಕ ಸಮಸ್ಯೆಗಳಿವೆ. ಇದಕ್ಕೆ ಪರಿಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *