ಅಹಂ..ಅಹಂಕಾರ..ಯುದ್ಧವಿಲ್ಲದೆ ಒಂದು ರಾಜ್ಯ ಗೆದ್ದಿರುವ ರಾಜ ಪುನೀತ್ ರಾಜ್ಕುಮಾರ್ : ಜೂ.ಎನ್ಟಿಆರ್

suddionenews
1 Min Read

ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಮುಖ್ಯ ಅತಿಥಿಯಾಗಿ ರಜನಿಕಾಂತ್, ಜೂ. ಎನ್ಟಿಆರ್ ಬಂದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಜೂ. ಎನ್ ಟಿ ಆರ್, ಅಪ್ಪು ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಹಂ ಇಲ್ಲದೆ.. ಅಹಂಕರಾವಿಲ್ಲದೆ… ಯುದ್ದವನ್ನು ಮಾಡದೆ ಒಂದು ವ್ಯಕ್ತಿತ್ವದಿಂದ, ತನ್ನ ನಗುವಿನಿಂದ ಇಡೀ ರಾಜ್ಯವನ್ನೇ ಗೆದ್ದಿರುವ ರಾಜ ಯಾರು ಎಂದರೆ ಅದು ಶ್ರೀ ಪುನೀತ್ ರಾಜ್ಕುಮಾರ್ ಅವರು ಒಬ್ಬರೇ. ಇವರು ಕರ್ನಾಟಕದ ಸೂಪರ್ ಸ್ಟಾರ್. ಗ್ರೇಟ್ ಸನ್ ಆಫ್ ಕರ್ನಾಟಕ, ಗ್ರೇಟ್ ಫಾದರ್, ಗ್ರೇಟ್ ಆಕ್ಟರ್, ಗ್ರೇಟ್ ಸಿಂಗರ್, ಗ್ರೇಟ್ ಡ್ಯಾನ್ಸರ್. ಇದೆಲ್ಲದರ ಜೊತೆಗೆ ಮಾನವೀಯ ಗುಣ ಹೊಂದಿರುವವರು.

ಒಬ್ಬ ಮನುಷ್ಯನಿಗೆ ಪರಂಪರೆ ಎನ್ನುವ ಉಪನಾಮ ಹಿರಿಯರಿಂದ ಬರುತ್ತದೆ. ಆದರೆ ವ್ಯಕ್ತಿತ್ವ ಎನ್ನುವುದು ಸ್ವಂತ ಸಂಪಾದನೆ. ಅವರ ನಗುವಿನಲ್ಲಿ ಶ್ರೀಮಂತಿಕೆ ಇತ್ತು. ಅದಕ್ಕೆ ಅವರನ್ನು ನಗುವಿನ ಒಡೆಯ ಅನ್ನೋದು. ಅವರಿಗೆ ಇವತ್ತು ಸಿಗುತ್ತಿರುವುದು ಕರ್ನಾಟಕ ರತ್ನ. ಆದ್ರೆ ದಯವಿಟ್ಟು ಯಾರು ತಪ್ಪು ತಿಳಿಯಬೇಡಿ ಕರ್ನಾಟಕ ರತ್ನದ ಅರ್ಥಾನೆ ಪುನೀತ್ ರಾಜ್ಕುಮಾರ್ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *