Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಠ್ಯಪುಸ್ತಕಕ್ಕೆ ಜನಿವಾರ ಹಾಕಬೇಡಿ : ಜ್ಞಾನ ಪ್ರಕಾಶ್ ಸ್ವಾಮೀಜಿ ಆಕ್ರೋಶ..!

Facebook
Twitter
Telegram
WhatsApp

 

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಾಗಿರುವ ದೋಷದ ವಿರೋಧ ಇಂದು ಸಾಕಷ್ಟು ಜನತೆ ಬೀದಿಗೆ ಇಳಿದಿದ್ದಾರೆ. ಈ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ನೀಡಕೂಡದು ಎಂದು ಒತ್ತಾಯಿಸಿದ್ದಾರೆ. ಇಂದು ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಈ ಬೃಹತ್ ಪ್ರತಿಭಟನೆ ನಡೆದಿದೆ.

ಈ ವೇಳೆ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿದ್ದು, ನಾವೆಲ್ಲ ತಪ್ಪು ಮಾಡಿದ್ದೇವೆ. ಅವರಿಗೆ ರಾಗಿ, ಭತ್ತ, ಎಣ್ಣೆ, ಮೆಟ್ಟು ಹೊಲಿದು ಕೊಟ್ಟಿದ್ದೇವೆ. ತುಪ್ಪ, ಗುಡಿ ಸೇರಿದಂತೆ ಎಲ್ಲವೂ ಮಾಡಿಕೊಟ್ಟೆವು. ನಾವು ಹೊರಗಡೆ ನಿಂತು ನೀವು ಮಹಾನ್ ಪೂಜ್ಯರು ಎಂದು ತಲೆ ಮೇಲೆ ಕೂರಿಸಿಕೊಂಡಿದ್ದಕ್ಕೆ, ನಮ್ಮ ತಲೆ ಮೇಲೆ ಕಾಲಿಟ್ಟಿದ್ದಾರೆ.

ಡಾಕ್ಟರ್ ರಾಜಕುಮಾರ್ ಅವರು ಕುವೆಂಪು ಬಗ್ಗೆ ಮಾತಾಡಿ ಎಂದಿದ್ದಕ್ಕೆ, ಕುವೆಂಪು ಅವರ ಬಗ್ಗೆ ಮಾತಾಡುವಷ್ಟು ನಾನು ಬೆಳಿದಿಲ್ಲ ಎಂದು ಹೇಳಿದ್ದರು. ಇವರೆಲ್ಲಾ ಕುವೆಂಪು ಅವರ ಬೂಟಿನ ದೂಳಿನ ಸಮವಿಲ್ಲ. ಬಸವಣ್ಣನವರ ಕಾಲಿನ ದೂಳಿನ ಸಮವಿಲ್ಲ. ಮೊದಲು ಶಾಲೆಯ ಗೋಡೆ ಮೇಲೆ ಗಾಂಜಾ ,ತಂಬಾಕು ನಿಷೇಧಿಸಲಾಗಿದೆ ಎಂದು ಬರೆಯುಲಾಗುತ್ತಿತ್ತು. ಇದರ ಅವಶ್ಯಕತೆವಿಲ್ಲ ಯಾಕೆಂದರೆ ಪಠ್ಯಪುಸ್ತಕಗಳಲ್ಲಿ ಗಾಂಜಾ ಅಫೀಮ್ ಎಂಬುಂತೆ ಕೋಮುವಾದಿ ತುಂಬಿದಿದ್ದಾರೆ.

ಶಾಲೆಗಳೇನು ನಿಮ್ಮ ಆರ್‌ಎಸ್‌ಎಸ್ ಶಾಖೆಗಳಾ. ಕುವೆಂಪು ಅವರಿಗೆ ಮಾಡಿದ ಅಪಮಾನ ಸಿಎಂ ಗೆ ಮಾಡಿದ ಅಪಮಾನ. ಪೊಲೀಸ್ ರು ಸಣ್ಣಪುಟ್ಟದಕ್ಕೆ ಸ್ವಯ ದೂರು ದಾಖಲು ಮಾಡ್ತಾರೆ. ಈಗ ಯಾಕೆ ಸುಮ್ಮನೆ ಇದ್ದೀರಾ‌. ಸ್ವಯಂ ದೂರು ದಾಖಲು ಯಾಕೆ ಮಾಡಿಲ್ಲ. ಸಿಎಂ ಇಲ್ಲ ಬಂದು ಪಠ್ಯಪುಸ್ತಕ ವಿತರಣೆ ಮಾಡಲ್ಲ. ಬರಗೂರು ರಾಮಚಂದ್ರಪ್ಪ ಅವರ ಪಠ್ಯಪುಸ್ತಕ ಮುಂದುವರಿಸುತ್ತೇವೆ ಎಂದು ಹೇಳಬೇಕು ಇಲ್ಲವಾದಲ್ಲಿ. ಎಲ್ಲಾ ಸ್ವಾಮೀಜಿಗಳೂ ಸಿಎಂ ನಿವಾಸದ ಎದುರ ಬಂದು ಕುಳಿತುಕೊಳ್ಳುತ್ತೇವೆ. ಪಠ್ಯಪುಸ್ತಕಕ್ಕೆ ಜನಿವಾರ ಹಾಕಬೇಡಿ. ನನಗೆ ಬ್ರಾಹ್ಮಣರ ಬಗ್ಗೆ ಗೌರವವಿದೆ. ನನ್ನ ಗುರುಗಳು ಬ್ರಾಹ್ಮಣರು. 3.8 ರಷ್ಟು ಇರುವವರು ಹೇಳಿದಂಗೆ ಕೇಳಲು ನಾವು ರೆಡಿಯಿಲ್ಲ. ಉಳಿದ ಸಮುದಾಯಗಳು ಇನ್ನೂ ಜೀವಂತವಾಗಿದ್ದೇವೆ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ನಿಮ್ಮ ಸಂಗಾತಿ ಮಾತು ಕೇಳುತ್ತಿಲ್ಲವೇ?

ಈ ರಾಶಿಯ ನಿಮ್ಮ ಸಂಗಾತಿ ಮಾತು ಕೇಳುತ್ತಿಲ್ಲವೇ? ಈ ರಾಶಿಯವರಿಗೆ ವರ ಪಸಂದೇ ಆಗುತ್ತಿಲ್ಲ.   ಬುಧವಾರ- ರಾಶಿ ಭವಿಷ್ಯ ಮೇ-22,2024 ಸೂರ್ಯೋದಯ: 05:46, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಹೆಚ್ಚಿನ ಶುಲ್ಕ ವಸೂಲಿ – ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿಗಾಗಿ ಮಾನವೀಯತೆ ಮರೆತು ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು

ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಮತ ಎಣಿಕೆಕಾರ್ಯ ನಿರ್ವಹಿಸಲು ಸೂಚನೆ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21 : ಏಪ್ರಿಲ್ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂನ್ 04ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಚುನಾವಣೆಯ

error: Content is protected !!