ಜೆಡಿಎಸ್ ಅವರ ನಡೆ ನಿಮಿಷ ನಿಮಿಷ ಬದಲಾಗುತ್ತದೆ: ಆರ್ ಅಶೋಕ್

suddionenews
1 Min Read

ಬೆಂಗಳೂರು: ಇವತ್ತು ಪ್ರಜಾಪ್ರಭುತ್ವ ಉಳಿಬೇಕಾದರೆ RSSನಿಂದ,ಆರ್.ಎಸ್ ಎಸ್ ಒಂದು ದೇಶ ಭಕ್ತಿ ಸಂಸ್ಥೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಲ್ಲಿ ಅತೀ ಹೆಚ್ಚು ಆರ್.ಎಸ್ ಎಸ್ ನವರು ಬಂಧಿಯಾಗಿದ್ರು, ಇತರ IAS, IPS ಪಾಸಾಗುವುದು ಒಂದು ಪರೀಕ್ಷೆ ಇದರಲ್ಲಿ ಕುಮಾರಸ್ವಾಮಿ ತಪ್ಪು ಹುಡುಕುವುದು ಸರಿಯಲ್ಲ ಎಂದರು.

ಕುಮಾರಸ್ವಾಮಿ ಪಾಕಿಸ್ತಾನ ವ್ಯವಸ್ಥೆ ನೋಡಿ ಹೇಗಿರಬೇಕು, ಇದು ಭಾರತ ಅಂತಹ ವ್ಯವಸ್ಥೆ ಇಲ್ಲಿ ಇರಲ್ಲ. RSS ದೇಶ ಭಕ್ತರನ್ನು ಕಟ್ಟುವ ಸಂಸ್ಥೆ,
ಅದರ ಬಗ್ಗೆ ಟೀಕೆ ಮಾಡವ ಅಧಿಕಾರ ಕುಮಾರಸ್ವಾಮಿ ಹಾಗೂ ಅವರ ಕುಟುಂಬಕ್ಕೆ ಕೊಟ್ಟಿಲ್ಲ. ಕುಮಾರಸ್ವಾಮಿ ಕಾಂಗ್ರೆಸ್ ಅನ್ನು ಟೀಕೆ ಮಾಡ್ತಾರೆ ಬಿಜೆಪಿಯಲ್ಲಿ ಟೀಕೆ ಮಾಡ್ತಾರೆ,ಅವರದು ಒಂದು ಸ್ಟ್ಯಾಂಡ್ ಇರಲ್ಲ. ಹಿಂದೆ ನಮ್ಮಲ್ಲಿ104 ಸೀಟ್ ಇದ್ರು ಜೆಡಿಎಸ್ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡ್ಕೊಂಡಿತ್ತು. ಜೆಡಿಎಸ್ ಅವರ ನಡೆ ನಿಮಿಷ ನಿಮಿಷ ಬದಲಾಗುತ್ತದೆ ಎಂದರು.

ನನ್ನ ಸೋಲಿಗೆ RSS ಎಂಬ ಮಲ್ಲಿಕಾರ್ಜುನ ಖರ್ಗೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಖರ್ಗೆ ಅವರು ನಿರಂತರವಾಗಿ
ಹೋರಾಟ ಮಾಡಲಿ. RSS ಯಾವುದೇ ಚುನಾವಣೆಯಲ್ಲಿ ಭಾಗವಹಿಸಲ್ಲ.ನಾವೆಲ್ಲ RSS , ನಮಗೆ ಹೆಮ್ಮೆ ಇದೆ. ಕೆಲವರು ಕಮ್ಯೂನಿಸ್ಟ್‌ ಸಿದ್ದಾಂತ ಕಡೆಯಿಂದ ಬಂದಿರ್ತಾರೆ.

ಸಂಸ್ಥೆ ಬಗ್ಗೆ ತಿಳಿಯದೇ ಮಾತಾಡಿದ್ದು ಸರಿಯಲ್ಲ.ಆನೆ ಕಾಲು ಮುಟ್ಟಿ , ಬಾಳೆ ಕಂದು ತರ ಇದೆ ಅಂತ ಹೇಳೋದು ತಪ್ಪು.ಸರಿಯಾಗಿ ನೋಡಿದ್ರೆ ಆನೆ ಸ್ವರೂಪ ಗೊತ್ತಾಗುತ್ತೆ
ಎಲ್ಲರಿಗೂ RSS ಟಾರ್ಗೆಟ್ ‌ಮಾಡಿದ್ರೆ ಪ್ರಚಾರ ಸಿಗುತ್ತೆ. RSS ರಿಯಾಕ್ಟರ್ ಮಾಡಲ್ಲ ಅಂತ ಮಾಡ್ತಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *