ನಾಮಪತ್ರ ಸಲ್ಲಿಕೆಯ ಕೊನೆ ದಿನವೂ ಮೊಳಕಾಲ್ಮೂರು ಸೇರಿದಂತೆ 12 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಜೆಡಿಎಸ್..!

suddionenews
1 Min Read

ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಹೀಗಾಗಿ ನಿನ್ನೆಯಿಂದ ತಾ‌ ಮುಂದು ನಾ ಮುಂದು ಅಂತ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಆದರೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಇರುವಾಗಲೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ.

ಮೊದಲ ಪಟ್ಟಿಯಲ್ಲಿ 93 ಹಾಗೂ ಎರಡನೇ ಪಟ್ಟಿಯಲ್ಲಿ 49, ಮೂರನೇ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಮೂರನೇ ಪಟ್ಟಿಯಲ್ಲಿ 12 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಬದಲಾವಣೆ‌ ಮಾಡಲಾಗಿದೆ. 7 ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ‌ ನೀಡಿದೆ.

ಈಗ ಬಿಡುಗಡೆಯಾದ ಪಟ್ಟಿ ಹೀಗಿದೆ: ಗೋಕಾಕ್ – ಚಂದನ್ ಕುಮಾರ್, ಕುತ್ತೂರು – ಅಶ್ವಿನಿ ಸಿಂಗಯ್ಯ ಪೂಜೇರಾ, ಯಾದಗಿರಿ – ಎಬಿ ಮಾಲಕರೆಡ್ಡಿ, ಬಾಲ್ಕಿ – ರೌಫ್ ಪಟೇಲ್, ಶಿಗ್ಗಾಂವಿ – ಶಶಿಧರ್ ಚನ್ನಬಸಪ್ಪ ಯಲಿಗಾರ, ಮೊಳಕಾಲ್ಮೂರು – ಮಹಾದೇವಪ್ಪ, ಪುಲಿಕೇಶಿನಗರ – ಅನುರಾಧ, ಶಿವಾಜಿನಗರ- ಅಬ್ದುಲ್ಲಾ ಜಫರ್ ಅಲಿ, ಶಾಂತಿ ನಗರ- ಮಂಜುನಾಥ್ ಗೌಡ, ಬೆಳ್ತಂಗಡಿ – ಅಶ್ರೂಫ್ ಅಲಿ, ಮಂಗಳೂರು ನಗರ ಉತ್ತರ – ಮೊಯಿನುದ್ದೀನ್ ಭಾವ, ಮಂಗಳೂರು – ಅಲ್ತಾಫ್ ಕುಂಪಾಲ, ಬಂಟ್ವಾಳ – ಪ್ರಕಾಶ್ ರಫಾಯಲ್ ಗೊಮ್ಸ್.

Share This Article
Leave a Comment

Leave a Reply

Your email address will not be published. Required fields are marked *