ಜೀವಂತ ಬಾಂಬ್ ಸಿಕ್ಕಿದೆಯಂತೆ : ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಮೋದ್ ಮುತಾಲಿಕ್ ಕೆಂಡಾಮಂಡಲ

1 Min Read

 

ಧಾರವಾಡ: ಸಿಸಿಬಿ ಪೊಲೀಸರು ಉಗ್ರರನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ದೊಡ್ಡ ಸ್ಕೆಚ್ ಅನ್ನೇ ಈ ಉಗ್ರರು ಹಾಕಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಯೋತ್ಪಾದಕರಂತ ಕೆಟ್ಟ ಹುಳಗಳು ಹೊರಗೆ ಬರುತ್ತಿವೆ ಎಂದು ಕಿಡಿಕಾರಿದ್ದಾರೆ.

ಇವತ್ತು ಸಿಸಿಬಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ನಾನು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಅವರ ಬಳಿ ಜೀವಂತ ಬಾಂಬ್ ಸಿಕ್ಕಿದೆಯಂತೆ. ಸುಲ್ತಾನ ಪಾಳ್ಯದಲ್ಲಿ ಇವರು ವಾಸವಾಗಿದ್ದರು ಎನ್ನಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಗಳು ಬಂದ ಮೇಲೆ ಇಂತ ಹುಳಗಳೆಲ್ಲಾ ಹೊರಗೆ ಬರುತ್ತಿವೆ.

ಇವರಿಗೆಲ್ಲಾ ಕಾಂಗ್ರೆಸ್ ಸರ್ಕಾರದಿಂದ ಫೋಷಣೆಯಾಗುತ್ತಿದೆ. ಈ ಮೂಲಕ ಲಕ್ಷಾಂತರ ಜನರನ್ನು ಕೊಂದು ಹಾಕಿದ್ದಾರೆ. ಈಗ ಕಾಂಗ್ರೆಸ್ ಬಂದಿದ್ದರಿಂದ ಇಂತಹವುಗಳು ಇನ್ನೂ ಹೆಚ್ಚಾಗಿದೆ. ಬಿಜೆಪಿ ಇದ್ದಾಗ ಹರ್ಷನ ಕೊಲೆಯಾಯ್ತು. ಜೈಲಿನಲ್ಲಿದ್ದ ಆರೋಪಿಗಳು ಫೋನಿನಲ್ಲಿ‌ಮಾತಾಡುತ್ತಿದ್ದರಂತೆ. ಇವತ್ತುಬಸಿಕ್ಕ ಆರೋಪಿಗಳು ಕೂಡ ಅವರ ಸಂಪರ್ಕದಲ್ಲಿದ್ದರು ಎನ್ನಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *