in

ಶಾಸಕರಾಗಿ‌ ಕೆಲಸ ಮಾಡಲು ಅವಕಾಶ ನೀಡಿದ್ದರೆ ಸಾಕಿತ್ತು : ಜಗದೀಶ್ ಶೆಟ್ಟರ್ ಮಾತಿನ ಅರ್ಥವೇನು..?

suddione whatsapp group join

 

 

ಶಿರಸಿ : ಇಂದು ಜಗದೀಶ್ ಶೆಟ್ಟಿರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ರಾಜೀ‌ನಾಮೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ನನಗೆ ಯಾವ ಹುದ್ದೆಯೂ ಬೇಡವಾಗಿತ್ತು. ಶಾಸಕರಾಗಿ ಕೆಲಸ ಮಾಡಲು ಅವಕಾಶ ನೀಡಿದ್ದರೆ ಸಾಕಿತ್ತು ಎಂದಿದ್ದಾರೆ.

ನಾನು ಈ ಹಿಂದೆ ನಿರ್ಧಾರ ಮಾಡಿದಂತೆಯೇ ರಾಜೀನಾಮೆ ನೀಡುತ್ತಿದ್ದೇನೆ. ನಾಯಕರು ನಿನ್ನೆ ನನ್ನನ್ನು ಸಂಪರ್ಕ ಮಾಡಿದ್ದರು. ಇಂದು ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೆ ಸಹಕಾರ ನೀಡಿ ಸಂಘಟನೆ ಮಾಡಿದ್ದೇನೆ. ನನಗೆ ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿ ಮಾಡಿರುವುದು ಬೇಸರ ತರಿಸಿದೆ.

ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ. ಯಡಿಯೂರಪ್ಪ ಅವರು ನನ್ನ ಪರವಾಗಿ ಮಾತನಾಡಿದರು. ಆದರೆ ಈಗ ಈ ರೀತಿ ಹೇಳುತ್ತಿರುವುದು ಮೇಲಿನ ನಾಯಕರ ಕಾರಣದಿಂದ ಮುಂದಿನ ನಿರ್ಧಾರವನ್ನು ಹುಬ್ಬಳ್ಳಿಗೆ ಹೋಗಿ ತೀರ್ಮಾನ ಮಾಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ ಶೆಟ್ಟರ್ : ಕಾಂಗ್ರೆಸ್ ಸೇರಿದರೆ ಆಗುವ ಲಾಭಗಳೇನು..?

ಜಗದೀಶ್ ಶೆಟ್ಟರ್ ಗೆ ಕ್ಷಮೆಯೇ ಇಲ್ಲ : ಯಡಿಯೂರಪ್ಪ ಆಕ್ರೋಶ