ಇಡಿ ತನ್ನ ಹೆಸರನ್ನು ಬದಲಾಯಿಸಿಕೊಂಡರೆ ಒಳ್ಳೆಯದ್ದು : ಡಿಕೆ ಸುರೇಶ್ ವಾಗ್ದಾಳಿ

suddionenews
1 Min Read

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಸದ ಡಿಕೆ ಸುರೇಶ್ ಇಂದು ಡಿಕೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗುವುದಕ್ಕೂ ಮೊದಲು ಮಾತನಾಡಿದ ಡಿಕೆ ಸುರೇಶ್, ಮೊದಲು ಇಡಿ ತನ್ನ ಹೆಸರನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇಡಿ ತನ್ನ ಹೆಸರನ್ನು ಬದಲಾಯಿಸಿಕೊಂಡರೆ ಒಳ್ಳೆಯದ್ದು. ಇದು ಇಡಿ ಅಲ್ಲ.. ಹರಾಸ್ಮೆಂಟ್ ಇಲಾಖೆ. ನನಗೆ ಮತ್ತು ಡಿಕೆ ಶಿವಕುಮಾರ್ ಅವರಿಗೆ ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ವಿಚಾರಣೆಗೆ ಇಂದು ಹಾಜರಾಗಲು ನಾನು ಬಂದಿದ್ದೇನೆ.

ಈ ಹಿಂದೆಯೂ ಇಡಿ ವಿಚಾರಣೆಗೆ ಕರೆದಿದ್ದರು. ಈ ಹಿಂದೆಯೇ ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇವೆ. ಆದ್ರೆ ಇಂದು ಮತ್ತೆ ಯಾಕೆ ಕರೆದಿದ್ದಾರೆ ಗೊತ್ತಿಲ್ಲ. ವಿಚಾರಣೆಗೆ ಸಂಪೂರ್ಣ ಸಹಕಾರ ಅಂತು ನೀಡುತ್ತೇವೆ. ಇಂದು ಏನು ಪ್ರಶ್ನೆ ಕೇಳುತ್ತಾರೆ ನೋಡೋಣಾ. ವಿಚಾರಣಾಧಿಕಾರಿಗಳು ಬದಲಾಗಿದ್ದಾರೆ ಎಂಬುದು ನೋಟಿಸ್ ನಿಂದಾಗಿ ಗೊತ್ತಾಗಿದೆ. ಇನ್ನು ಇಂದು ಪೂರ್ವನಿಯೋಜಿತ ಕಾರ್ಯಕ್ರಮ ಇರುವುದಕ್ಕೆ ಡಿಕೆ ಶಿವಕುಮಾರ್ ಬಂದಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *