Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಿದ್ದು ನಿಜ : ಸೂರಪ್ಪ ಬಾಬು ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲ ದಿನಗಳಿಂದ ಸುದೀಪ್ ಹಾಗೂ ಕುಮಾರ್ ಗಲಾಟೆಯ ಸದ್ದು ಕಡಿಮೆಯಾಗುವಂತೆ ಕಾಣುತ್ತಿಲ್ಲ. ರವಿಚಂದ್ರನ್, ಶಿವಣ್ಣ ಇದರ ಬಗ್ಗೆ ಚರ್ಚೆ ನಡೆಸಿದರೂ ಸಮಸ್ಯೆಗೆ ಇನ್ನು ಪರಿಹಾರ ಸಿಕ್ಕಂತೆ ಕಾಣುತ್ತಿಲ್ಲ. ಇದರ ಹಿಂದೆ ಸೂರಪ್ಪ ಬಾಬು ಇದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದೀಗ ಸೂರಪ್ಪ ಬಾಬು ಈ ಬಗ್ಗೆ ಮಾತನಾಡಿದ್ದಾರೆ.

ಕೆಸಿಎನ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ಹೋಗಿದ್ದು ನಿಜ. ಅವರನ್ನ ನಾನು ತಡೆದಿದ್ದೆ. ಅವರು ನನ್ನ ಸ್ನೇಹಿತರು. ಆದ್ರೆ ನಾನು ಸಪೋರ್ಟ್ ಮಾಡಿದೆ ಅಂತ ಹೇಳಿದ್ದಾರೆ. ವಾಣಿಜ್ಯ ಮಂಡಳಿ ಯಾರಪ್ಪದು..? ನಾನು ಮೆಂಬರ್ ಅದಕ್ಕೆ. ಕಾರ್ಯಕಾರಿ ಸಮಿತಿ ಸದಸ್ಯ ಆಗಿದ್ದೆ.

ಇದೇ ವೇಳೆ ಚಂದ್ರಚೂಡ್ ಗೆ ಸೂರಪ್ಪ ಬಾಬು ವಾರ್ನಿಂಗ್ ನೀಡಿದ್ದು, ಯಾವಾಗ ನನ್ನ ಹೆಂಡ್ತಿ ಮಕ್ಕಳ ವಿಷ್ಯಕ್ಕೆ ಬಂದ್ರಿ ಕೋಪ ನೆತ್ತಿಗೆ ಏರಿತು. ಅದಕ್ಕೆ ಈಗ ಉತ್ತರಿಸುವ ಸಮಯ ಬಂದಿದೆ. ನನ್ನ ಸಿನಿಮಾದಲ್ಲಿ ನಟಿಸಿರುವುದು ಎಲ್ಲಾ ದೊಡ್ಡ ದೊಡ್ಡ ಹೀರೋಗಳೇ. ಸುದೀಪ್ ಸರ್ ನನ್ನ ಬಗ್ಗೆ ಎಲ್ಲೂ ಕಂಪ್ಲೇಂಟ್ ಮಾಡಿಲ್ಲ. ಇವತ್ತು 3 ಸಿನಿಮಾಗಳನ್ನ ದೊಡ್ಡ ಸ್ಟಾರ್ ಗಳ ಜೊತೆ ಮಾಡ್ತಿದೀನಿ.

ಕುಮಾರ್ ಏನೋ ಮಾತಾಡಿದ್ದಕ್ಕೆ ನಾನ್ ಜವಾಬ್ದಾರಿನಾ..?. ಆತನಿಗೆ ನ್ಯಾಯ ಕೊಡಿಸೋಕೆ ನಾಲ್ಕು ಜನ್ರ ಹತ್ರ ಹೋಗಿದ್ದೆ. ಸರಿ ಮಾಡಿ ಕೊಡಿ ಅಂತ. ಆದ್ರೆ ಒಳ್ಳೆ ಕೆಲಸ ಮಾಡಿ ಇಲ್ಲಾಂದ್ರೆ ಬಿಡಿ.
ಸಾಲ ಮಾಡಿ ಬಡ್ಡಿ ಕಟ್ಟೋ ಅವಶ್ಯಕತೆ ನನಗಿಲ್ಲ. ನನ್ನ ಮಗಳು ಮೆರಿಟ್ ಮೇಲೆ ಓದ್ತಾಯಿರೋದು. ನಾನು ಮನೆ ಖರೀದಿ ಮಾಡಿರೋದನ್ನ ಮಾರಿದಿನಿ. ಎರಡು ಮೂರು ವರ್ಷಗಳ ಹಿಂದೆ ಮಾತನಾಡಿರೋದನ್ನ ಈಗ ಬಿಟ್ಟಿದ್ದಾರೆ.

ನನ್ನ ಮನೆ ವಿಷಯ ಬಂದಿದ್ದಕೆ ನಾನು ಸುದ್ದಿಗೋಷ್ಠಿ ಮಾಡ್ತಿರೋದು. ನಾನು ದುರಹಂಕಾರಿ ಮನುಷ್ಯ ಅಲ್ಲ. ನನಗೆ 56 ವರ್ಷ. ಯಾವಾಗ ಸಾಯ್ತಿನೋ ಗೊತ್ತಿಲ್ಲ. ಚಂದ್ರಚೂಡ್ ಅವರೇ ಮನೆ ಒಡೆಯೋ ಕೆಲಸ ಮಾಡಬೇಡಿ. ನಂಬಿಕೆ ಇಲ್ಲ ಅಂದ್ರೆ ಅಗ್ರಿಮೆಂಟ್ ಮಾಡ್ಕೊಳಿ. ಚಂದ್ರಚೂಡ್ ಎದುರು ಬಂದ್ರು ಅವನ ಜೊತೆ ನಾನು ಮಾತಾಡಲ್ಲ. ನನ್ನ ಒಬ್ಬನ ಬಗ್ಗೆ ತೇಜೋವದೆ ಮಾಡಿಲ್ಲ ಅವರು. ಆತ ನನಗೆ ಸಂಬಂಧ ಇಲ್ಲದೆ ಇರೋ ವ್ಯಕ್ತಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!