ನೀವಿನ್ನು ಉಪಮುಖ್ಯಮಂತ್ರಿ, ನಿಮ್ಮನ್ನ ಸಿಎಂ ಮಾಡಿದರೆ ಕಷ್ಟ : ಚಂದ್ರಚೂಡ್ ಹಿಂಗೇಳಿದ್ಯಾಕೆ..?

suddionenews
1 Min Read

ಬೆಂಗಳೂರು; ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂಭ್ರಮದಲ್ಲಿ ಸ್ಟಾರ್ ನಟರು ಭಾಗವಹಿಸಿಲ್ಲ ಎಂಬುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶಗೊಂಡು ನೀಡಿದ ಹೇಳಿಕೆ ಇಂದು ಹಲವರ ವಿರೋಧಕ್ಕೆ‌ ಕಾರಣವಾಗಿದೆ. ಅದರಲ್ಲೂ ಚಿತ್ರರಂಗ ವರ್ಸಸ್ ಸರ್ಕಾರ ಎಂಬಂತೆ ಆಗಿದೆ. ಇದೀಗ ಡಿಕೆ ಶಿವಕುಮಾರ್ ಹಾಗೂ ಶಾಸಕ ರವಿ ಗಾಣಿಗ ಮಾತಿಗೆ ಚಂದ್ರಚೂಡ್ ಲೈವ್ ಬಂದು ಪ್ರತಿಕ್ರಿಯೆ ನೀಡಿದ್ದಾರೆ.

ರವಿಕುಮಾರ್ ನೇರವಾಗಿ ಹೆಸರು ತೆಗೆದುಕೊಂಡು ಮಾತನಾಡಬೇಕಿತ್ತು. ಆಗ ಅವರ ಮಾತಿಗೆ ಒಂದು ತೂಕ ಒರ್ತಾ ಇತ್ತು. ಈ ಹೀರೋಗಳನ್ನ ಬ್ಯಾನ್ ಮಾಡಬೇಕು. ಶಾಸಕರಾಗಿ ಈ ಹೇಳಿಕೆ‌ ನೀಡಬಾರದು. ಹಿಟ್ಲರ್ ರೀತಿ ಆಡಬಾರದು. ರವಿಕುಮಾರ್ ಅವರು ಕ್ಷಮೆ ಕೇಳಬೇಕು. ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದೀರಿ. 2004ರಿಂದ ಈವರೆಗೆ ಅವರು ಅವಾರ್ಡ್ ತೆಗೆದುಕೊಂಡಿಲ್ಲ. ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ದರು. ಈ ಮೊದಲು ಅವಾರ್ಡ್ ಕೊಡುತ್ತೇವೆ ಎಂದು ಕೊಟ್ಟಿಲ್ಲ. ರಾಜ್ಯ ಪ್ರಶಸ್ತಿ ಎಂದರೆ ಅಸಹ್ಯವಾಗಿ ಹೋಗಿದೆ. ಅವಾರ್ಡ್ಸ್ ನಿರಾಕರಿಸೋದಕ್ಕೆ ಅವರದ್ದೇ ಆದ ಕಾರಣವಿದೆ. ಪಕ್ಷದ ಕಾರ್ಯಕ್ರಮಕ್ಕೆ ಚಿತ್ರರಂಗದವರು ಬಂದಿಲ್ಲ ಎಂದು ಅಧಿಕಾರಕ್ಕೆ ಬಂದ ಮೇಲೆ ಸೇಡು ತೀರಿಸಿಕೊಳ್ಳುವುದು ತಪ್ಪು.

ರಾಜಕಾರಣಿಗಳು ಹಿಟ್ಲರ್ ನೀತಿ ತೋರಬಾರದು. ನೀವೂ ಇನ್ನೂ ಉಪಮುಖ್ಯಮಂತ್ರಿ. ನಿಮ್ಮನ್ನ ಸಿಎಂ ಮಾಡಿದರೆ ರಾಜ್ಯಕ್ಕೆ ಕಷ್ಟ ಆಗುತ್ತದೆ. ಓರ್ವ ಹಿಟ್ಲರ್ ನ ತಂದು ಕೂರಿಸಬಾರದು. ಈ ವರ್ತನೆ ಬಿಟ್ಟರೆ ದೊಡ್ಡ ನಾಯಕರಾಗ್ತೀರಾ. ಪುಡಿ ರೌಡಿ ಥರ ಮಾತನಾಡೋದು ಬಿಟ್ಟು ಬಿಡಿ, ನಿಮ್ಮ ಸಾಧುಕೋಕಿಲ ತಪ್ಪು ಮಾಡಿದ್ದಾರೆ. ಅದನ್ನು ಮೊದಲು ಸರಿ ಮಾಡಿ ಎಂದು ಚಂದ್ರಚೂಡ ಅವರು ಲೈವ್ ಬಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *