ಇದೊಂದು ವ್ಯವಸ್ಥಿತ ಸಂಚು, ಎಲ್ಲಾ ಮಕ್ಕಳು ಸಮವಸ್ತ್ರ ಧರಿಸಿ : ಸಚಿವ ಕೆ.ಎಸ್. ಈಶ್ವರಪ್ಪ

suddionenews
1 Min Read

ಚಿತ್ರದುರ್ಗ,(ಫೆ.10) : ಮಕ್ಕಳಿಗೆ ಸಮವಸ್ತ್ರ ಬಗ್ಗೆ ಎಲ್ಲರೂ ತಿಳಿ ಹೇಳಬೇಕಿತ್ತು. ಉಡುಪಿಯಲ್ಲಿ 6  ಮಂದಿ ಮಾತ್ರ ಹಿಜಾಬ್ ಧರಿಸಿ ಹೋಗಿದ್ದಾರೆ, ಅವರಿಗೆ ಸಮಾಧಾನ ಮಾಡಬೇಕಿತ್ತು ಕಾಂಗ್ರೆಸ್ ನಾಯಕರು, ಮುಸ್ಲಿಂ ನಾಯಕರು ಮಾಡಿದ್ದರೆ, ದೇಶದಲ್ಲಿ ಈ ಸ್ಥಿತಿ ಬರ್ತಾ ಇರಲಿಲ್ಲ. ಬೇಕು ಎಂದು ವ್ಯವಸ್ಥಿತವಾಗಿ ನಡೆಸಿರುವಂತ ಸಂಚು ಇದು, ಇದನ್ನ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ ಎಲ್ಲಾ ಮಕ್ಕಳು ಸಮವಸ್ತ್ರ ಧರಿಸಿ ಎಂದು ಈಗಲೂ ನಾನು ಹೇಳುತ್ತೇನೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ. ಓಟಿನ ಮೇಲೆ ಕಣ್ಣಿಟ್ಟು ಮಾಡುತ್ತಿರುವ ಕುತಂತ್ರ ಇದಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *