ಸುದ್ದಿಒನ್, ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಪ್ರವಾಸ ಮುಗಿಸಿ ನೇರವಾಗಿ ಬೆಂಗಳೂರಿಗೆ ತಲುಪಿದ್ದಾರೆ. ಚಂದ್ರಯಾನ-3 ಯಶಸ್ವಿಗೆ ಕಾರಣವಾಗಿ ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಹರಡಿದ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ಅಭಿನಂದಿಸಿದರು.

ಶನಿವಾರ ಬೆಳಗ್ಗೆ ಬೆಂಗಳೂರಿನ ಹೆಚ್. ಎ.ಎಲ್. ಏರ್ ಪೋರ್ಟ್ ತಲುಪಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಭ್ರಮವನ್ನು ತಡೆಯಲಾರದೆ ನೇರವಾಗಿ ಬೆಂಗಳೂರಿಗೆ ಬಂದು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಇಸ್ರೋ ತಲುಪಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಇದನ್ನು ನವ ಭಾರತದ ಉದಯ ಎಂದು ಕೊಂಡಾಡಲಾಗುತ್ತದೆ. ಜೈ ವಿಜ್ಞಾನ ಮತ್ತು ಜೈ ಅನುಸಂಧಾನ ಘೋಷಣೆಗಳನ್ನು ಕೂಗಿ ಜನರನ್ನು ಹುರಿದುಂಬಿಸಿದರು.

ಇಂದು ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಭಾರತ ಜಗತ್ತಿಗೆ ಬೆಳಕು ಚೆಲ್ಲುತ್ತದೆ. ನಾನು ದಕ್ಷಿಣ ಆಫ್ರಿಕಾದಲ್ಲಿದ್ದರೂ ನನ್ನ ಹೃದಯ ಇಲ್ಲೇ ಇತ್ತು. ನಾನು ನಿಮ್ಮನ್ನು ಭೇಟಿಯಾಗಲು ಎದುರು ನೋಡುತ್ತಿದ್ದೆ. ಭಾರತದ ಸಾಮರ್ಥ್ಯ ಏನೆಂದು ಇಸ್ರೋ ಇಂದು ಇಡೀ ಜಗತ್ತಿಗೆ ತೋರಿಸಿದೆ. ಇಸ್ರೋ ವಿಜ್ಞಾನಿಗಳ ಪ್ರಯತ್ನ ಮತ್ತು ಬದ್ಧತೆಗೆ ನಾನು ವಂದಿಸುತ್ತೇನೆ. ಚಂದ್ರಯಾನ-3ರ ಯಶಸ್ಸು ದೇಶದ ಜನತೆಗೆ ಸಂತಸ ತಂದಿದೆ. ಇದು ಸಾಮಾನ್ಯ ಯಶಸ್ಸಲ್ಲ. ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಪ್ರತಿ ಮನೆಯ ಮೇಲೆ ಮಾತ್ರವಲ್ಲ, ಚಂದ್ರನ ಮೇಲೂ ಭಾರತದ ಧ್ವಜ ಹಾರಾಡುತ್ತಿದೆ.
ಇಸ್ರೋ ಸಾಧಿಸಿರುವ ಯಶಸ್ಸು ದೇಶಕ್ಕೆ ಹೆಮ್ಮೆ ತಂದಿದೆ. ಭಾರತವು ತನ್ನ ಶಕ್ತಿ ಸಾಮರ್ಥ್ಯಗಳನ್ನು ಪ್ರಪಂಚದಾದ್ಯಂತ ವೈಭವೀಕರಿಸುತ್ತಿದೆ. ಯಾರೂ ಮಾಡಲಾಗದ ಸಾಧನೆಯನ್ನು ಇಸ್ರೋ ವಿಜ್ಞಾನಿಗಳು ಸಾಧಿಸಿದ್ದಾರೆ. ಚಂದ್ರಯಾನ-3 ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಹೆಸರಿಸುತ್ತಿದ್ದೇವೆ. ಈ ಪ್ರಯೋಗದಲ್ಲಿ ಸಾಕಷ್ಟು ನಾರಿ ಶಕ್ತಿ ಇದೆ. ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ ಎಂದರು.
#WATCH | The spot where Chandrayaan-3’s moon lander landed, that point will be known as ‘Shivshakti’, announces Prime Minister Narendra Modi at ISRO Telemetry Tracking & Command Network Mission Control Complex in Bengaluru pic.twitter.com/1zCeP9du8I
— ANI (@ANI) August 26, 2023

