ಬೆಂಗಳೂರು: ಶಾಮನೂರು ಶಿವಶಂಕರಪ್ಪ ನಿಧನರಾಗುವವರೆಗೂ ಅಧ್ಯಕ್ಷರಾಗಿದ್ದ ಅಖಿಲ ಭಾರತ ಲಿಂಗಾಯತ ಮಹಾಸಭಾಗೆ ಇದೀಗ ಅವಿರೋಧವಾಗಿ ಈಶ್ವರ ಖಂಡ್ರೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಿಧನರಾದ ಭೀಮಣ್ಣ ಖಂಡ್ರೆ ಅವರು ಕೂಡ ಲಿಂಗಾಯತ ಮಹಾಸಭಾಗೆ ಅಧ್ಯಕ್ಷರಾಗಿದ್ದರು. ಈಶ್ವರ ಖಂಡ್ರೆ ಅವರು 24ನೇ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಮಹಾಸಭಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಶಾಮನೂರು ಶಿವಶಂಕರಪ್ಪ ನಿಧನದ ನಂತರ ಈ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಸರು ಕೂಡ ಕೇಳಿ ಬಂದಿತ್ತು. ಲಿಂಗಾಯತ ಪಂಚಪೀಠಾಧಿಪತಿಗಳಲ್ಲೊಬ್ಬರು ಯಡಿಯೂರಪ್ಪ ಅವರ ಹೆಸರನ್ನ ಸೂಚಿಸಿದ್ದರು. ಯಡಿಯೂರಪ್ಪ ಅವರು ವೀರಶೈವ ಮಹಾಸಭಾದ ಅಧ್ಯಕ್ಷರಾದರೆ ಸಂತೋಷ ಅಂತ ಕೂಡ ಹೇಳಿದ್ದರು. ಆದರೆ ಈಗ ಅವಿರೋಧವಾಗಿ ಈಶ್ವರ ಖಂಡ್ರೆ ಅವರನ್ನ ಆಯ್ಕೆ ಮಾಡಲಾಗಿದೆ.
ಈ ಸಂಬಂಧ ಸಭೆಯಲ್ಲಿ ಸಾಕಷ್ಟು ಚರ್ಚೆಯೂ ನಡೆದಿದೆ. 65 ಸದಸ್ಯರು ಕೂಡ ಕೂತು ಚರ್ಚೆ ನಡೆಸಿದ್ದಾರೆ. ಕಡೆಗೆ ಈಶ್ವರ ಖಂಡ್ರೆ ಹಾಗೂ ಪ್ರಭಾಕರ ಕೋರೆ ನಡುವೆ ಪ್ರಬಲ ಪೈಪೋಟಿ ಇತ್ತು. ಕೆಲವು ವೈದಿಕ ಮಾಧ್ಯಮಗಳು ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆಯ ನಡೆಯಲಿದೆ ಎಂದು ವರದಿ ಮಾಡುತ್ತಿವೆ. ಖಂಡ್ರೆ, ಕೋರೆಯವರ ಜೊತೆ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ, ಕೊನೆಗೆ ದಿಂಗಾಲೇಶ್ವರ ಸ್ವಾಮೀಜಿಯ ಹೆಸರನ್ನೂ ಅವು ಸೂಚಿಸಿದ್ದರು. ಇದಕ್ಕೆ ಪ್ರಶ್ನೆಗಖು ಉದ್ಭವಿಸಿದ್ದವು. ದಿಂಗಾಲೇಶ್ವರ ಸ್ವಾಮೀಜಿಯಿರುವುದು ಭಾವೈಕ್ಯತೆಯ ಮಠ, ಅದು ಲಿಂಗಾಯತ ಮಠವಲ್ಲ. ಅವರು ಹೇಗೆ ಇಲ್ಲಿ ಅಭ್ಯರ್ಥಿಯಾಗಲು ಸಾಧ್ಯ, ಎಂದು ಪ್ರಶ್ನಿಸಿದ್ದರು. ಇದಿಒಗ ಇದೆಲ್ಲವನ್ನು ಮೀರಿ ಇಂದು ಈಶ್ವರ್ ಖಂಡ್ರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.






