ಆಪರೇಷನ್ ಕಮಲದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಭಯ ಕಾಡುತ್ತಿದೆಯಾ..? ಕಾರ್ಯಕರ್ತರಿಗೆ ಹೇಳಿದ್ದೇನು..?

suddionenews
1 Min Read

ಮೈಸೂರು: ಆಪರೇಷನ್ ಕಮಲದ ಮುಖಾಂತರ ಸಮ್ಮಿಶ್ರ ಸರ್ಕಾರವನ್ನೇ ಕೆಡವಿದ ಭಯ ಇನ್ನು ಕಾಂಗ್ರೆಸ್ ನಲ್ಲಿ ಇದ್ದಂತೆ ಕಾಣುತ್ತಿದೆ. ಸದ್ಯ ಮತ್ತೆ ಚುನಾವಣೆ ಹತ್ತಿರವಾಗುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಭಾರತ್ ಜೋಡೋ ಯಾತ್ರೆಯ ಮೂಲಕ ಜನರ ಬಳಿಗೆ ಹೋಗುತ್ತಿದೆ. ಹೀಗಿರುವಾಗ ಸಿದ್ದರಾಮಯ್ಯ ತಮ್ಮ ಕಾರ್ಯಕರ್ತರಿಗೆ ಬಿಜೆಪಿ ಕರೆದರೆ ಹೋಗಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.

ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನಳೀನ್ ಕುಮಾರ್ ಕಟೀಲು ಒಬ್ಬ ಜೋಕರ್. ಆತ ಯಾವ ಹೋರಾಟ ಮಾಡಿದ್ದಾನೆ. ಅವರ ಹೇಳಿಕೆಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಇದೆಲ್ಲಾ ಆದ ಬಳಿಕ ಅಲ್ಲಿಂದ ವಾಪಾಸ್ ನಡೆದಿದ್ದಾರೆ. ಕಾರು ಹತ್ತಿ ಕುಳಿತಾಗಲೂ ತಮ್ಮ ಕಾರ್ಯಕರ್ತರನ್ನು ಕರೆದಿದ್ದಾರೆ. ಕರೆದು ಒಂದಷ್ಟು ಕಿವಿ ಮಾತು ಹೇಳಿದ್ದಾರೆ. ಕೇಳ್ರಯ್ಯ ಇಲ್ಲಿ. ಬಿಜೆಪಿಯವರು ಕರೆದರೆ ಯಾವುದೇ ಕಾರಣಕ್ಕೂ ಹೋಗಬೇಡಿ ಎಂದು ಎರೆಡೆರಡು ಬಾರಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಕಾರ್ಯಕರ್ತರು ಕೂಡ ನಾವೂ ಹೋಗುವುದಿಲ್ಲ ಎಂದು ನಿನ್ನೆಯೇ ತೀರ್ಮಾನ ಮಾಡಿದ್ದೀವಿ ಅಂತ ಧೈರ್ಯ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *