ಡಿಕೆಶಿ ಸಿಎಂ ಆಗೋದನ್ನ ತಡೆಯುತ್ತಿರೋದೆ ಕುಮಾರಸ್ವಾಮಿ ಅವ್ರ..?

1 Min Read

ಮಂಡ್ಯ: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಸಿಎಂ ಸ್ಥಾನವನ್ನ ಸಿದ್ದರಾಮಯ್ಯ ಬಿಟ್ಟುಕೊಡ್ತಿಲ್ಲ ಅಂತ ಡಿಕೆ ಶಿವಕುಮಾರ್ ಕೊರಗುತ್ತಿದ್ದಾರೆ. ಇದರ ನಡುವೆ ಮದ್ದೂರು ಶಾಸಕ ಉದಯ್ ಅವರು ಹೆಚ್ ಡಿ ಕುಮಾರಸ್ವಾಮಿ ಅವರೇ ಇದಕ್ಕೆಲ್ಲ ಕಾರಣ ಎನ್ನುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾತನ್ನಾಡಿದ ಕುಮಾರಸ್ವಾಮಿ ಅವರು, ಬಜೆಟ್ ನಲ್ಲಿ ಮಂಡ್ಯಗೆ ಏನು ಕೊಟ್ಟಿದ್ದಾರೆ. ಘೋಷಣೆ ಒಂದು ಬಿಟ್ಟರೆ ಅಂತ ಹೇಳಿಕೊಳ್ಳುವ ಬಜೆಟ್ ಏನು ಕೊಟ್ಟಿಲ್ಲ ಎಂದು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಮದ್ದೂರು ಶಾಸಕ ಉದಯ್ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ್ದು, ಅವರು ಟೀಕೆ ಯಾವುದಕ್ಕೆ ಮಾಡಿದ್ದಾರೆ. ಅಭಿವೃದ್ಧಿ ವಿಚಾರಕ್ಕೆ ಮಾಡಿದ್ದಾರಾ..? ಅವರ ಬಗ್ಗೆ ನನ್ನ ಚರ್ಚೆ ಅವಶ್ಯಕತೆ ಇಲ್ಲ. ಆ ವ್ಯಕ್ತಿಗೂ ನನಗೂ ಯಾಕೆ ಹೋಲಿಕೆ ಮಾಡ್ತೀರಾ..? ಆ ವ್ಯಕ್ತಿ ಬಗ್ಗೆ ಉತ್ತರ ಕೊಡುವುದಕ್ಕೆ ಅವಶ್ಯಕತೆ ಇದೆಯಾ..? ಎಂದಿದ್ದಾರೆ.

ಗ್ರಾಮೀಣ ಭಾಗದ ಜನರ ಕಷ್ಟವನ್ನ ಕುಮಾರಸ್ವಾಮಿ ಅವರು ಕೇಳಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ಇಲ್ಲ ನಾನು ಫೈವ್ ಸ್ಟಾರ್ ನಲ್ಲಿದ್ದೀನಿ. ಶ್ರೀಲಂಕಾಗೆ ಹೋಗಿ ಕುಳಿತುಕೊಂಡಿದ್ದೀನಿ. ನಾನೇಗೆ ಅದನ್ನ ತಡೆಯೋದಕ್ಕೆ ಆಗುತ್ತೆ. ಅವರು ಸಿದ್ದರಾಮಯ್ಯ ಅವರ ಜೊತೆಗೆ ಮಾತನ್ನಾಡಬೇಕು. ನಾನು ಸಿದ್ದರಾಮಯ್ಯ ಅವರಿಗೆ ಕಳೆದ ಒಂದು ವಾರದ ಹಿಂದೆ ಏನ್ ಹೇಳಿದ್ದೀನಿ. ಬಿಟ್ಟು ಕೊಡಪ್ಪ ಅಂತ ದಿನಾ ಹೇಳ್ತಾ ಇಲ್ವಾ ಎಂದಿದ್ದಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಶಾಸಕರ ಆರೋಪಕ್ಕೆ ಕ್ಲಾರಿಟಿಯನ್ನ ಕೊಟ್ಟಿದ್ದಾರೆ.

Share This Article