ನಿಜವಾಯಿತೇ ಬಬಲಾದಿ ಕಾಲಜ್ಞಾನ: ಮುಂದೇನಾಗುವುದು ಅನಾಹುತ ?

1 Min Read

ಉತ್ತರ ಕರ್ನಾಟಕದ ಅತಿ ಹೆಚ್ಚು ನಂಬಿಕಸ್ತ ಕಾಲಜ್ಞಾನ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಮಠದ ಭವಿಷ್ಯವಾಣಿ‌. ಇತ್ತೀಚೆಗೆ ನಡೆದ ಮಠದ ಜಾತ್ರೆಯಲ್ಲಿ ನುಡಿಯಲಾಗಿದ್ದ ಅಶುಭ ಮುನ್ಸೂಚನೆಗಳು ಈಗ ನಿಜವಾಗುತ್ತಿದೆ.

ಬಬಲಾದಿ ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯ ಅಮಾವಾಸ್ಯೆಯ ನಂತರ ನಡೆಯುವ ಜಾತ್ರೆಯಲ್ಲಿ ಓಲೆಗರಿಯ ಕಾಲಜ್ಞಾನವನ್ನು ಓದಲಾಗುತ್ತದೆ. ಈ ವರ್ಷದ ಕಾಲಜ್ಞಾನವು ಶುಭಕ್ಕಿಂತ ಅಶುಭ ಫಲಗಳನ್ನೇ ಹೆಚ್ಚು ಸೂಚಿಸಿತ್ತು.ಗಡಿಯಲ್ಲಿ ಭೀತಿ ಎದುರಾಗಲಿದೆ, ಯುದ್ಧದ ಕಾರ್ಮೋಡ ಕವಿಯಲಿದೆ” ಎಂದು ಬಬಲಾದಿ ಮುತ್ಯಾ ಮೊದಲೇ ಭವಿಷ್ಯ ಹೇಳಿದ್ದರು.ಈಗ ಈ ಭವಿಷ್ಯ ಅಮೇರಿಕಾ-ಇರಾನ್-ಇಸ್ರೇಲ್ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದೆ.ಯುದ್ಧದ ಜೊತೆಗೆ “ಮಳೆ-ಬೆಳೆ ವ್ಯತ್ಯಯ, ಪ್ರವಾಹ ಮತ್ತು ಗಡಿಯಲ್ಲಿ ಆತಂಕದ ಛಾಯೆ” ಇರಲಿದೆ ಎಂದು ಕಾಲಜ್ಞಾನ ಹೇಳಲಾಗಿದೆ‌.

ಬಬಲಾದಿ ಮಠದ ಇತಿಹಾಸ ನೋಡಿದರೆ, ಇದು 400-500 ವರ್ಷಗಳ ಹಳೆಯದು. ಶ್ರೀ ಸಿದ್ದೇಶ್ವರ ಸ್ವಾಮಿಗಳ ಕಾಲಜ್ಞಾನ ಪರಂಪರೆಯನ್ನು ಮುಂದುವರಿಸುತ್ತದೆ. ಮಠದ ಪೀಠಾಧಿಪತಿಗಳಾದ ಸಿದ್ದು ಹೊಳಿಮಠ ಮುತ್ಯಾ ಅಥವಾ ಸದಾಶಿವ ಮುತ್ಯಾ ಅವರು ಪ್ರತಿ ವರ್ಷ ಭವಿಷ್ಯ ನುಡಿಯುತ್ತಾರೆ. ಶಿವರಾತ್ರಿ ಜಾತ್ರೆಯಲ್ಲಿ ನುಡಿದ ಈ ಭವಿಷ್ಯಗಳು ಹಲವು ಮುಖ್ಯ ಅಂಶಗಳನ್ನು ಹೊಂದಿವೆ. ಮೊದಲನೆಯದಾಗಿ, “ದೊಡ್ಡ ದುಃಖದ ಸುದ್ದಿ ಬಂದೀತು” ಎಂದು ಹೇಳಲಾಗಿದೆ. ಇದು ಮಹಾನ್ ವ್ಯಕ್ತಿಯ ಸಾವು ಅಥವಾ ದೊಡ್ಡ ದುರಂತಕ್ಕೆ ಸಂಬಂಧಿಸಿದೆ ಎಂದು ತಜ್ಞರು ಹೇಳುತ್ತಾರೆ. ಎರಡನೆಯದು, “ಗಡಿಯಲ್ಲಿ ಭೀತಿ, ಯುದ್ಧದ ಕಾರ್ಮೋಡ” – ದೇಶದ ಸೀಮೆಗಳಲ್ಲಿ ಚಿಂತೆಯ ವಾತಾವರಣ ಮತ್ತು ಯುದ್ಧದ ಅಪಾಯ ಹೆಚ್ಚಾಗುವುದು ಎಂದು ಭವಿಷ್ಯ. ಮೂರನೆಯದು, ಬೆಂಕಿ ಅವಘಡಗಳು ಹೆಚ್ಚಾಗುವುದು, ಪ್ರಜೆಗಳಲ್ಲಿ ಕಲಹ, ಅಗ್ನಿ ವಿಕೋಪಗಳು ಎನ್ನಲಾಗುತ್ತಿದೆ.

Share This Article
Enable Notifications OK No thanks