ರಾಮನಗರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಕೆಲಸ ಮಾಡಿಸುವುದು ಸಹಜ. ಅದು ಒಂದು ರೀತಿಯ ಮಕ್ಕಳ ಕೌಶಲ್ಯ ತರಬೇತಿಯಂತೆಯೂ ಆಗುತ್ತದೆ. ಆದರೆ ಆ ಕೆಲಸಗಳು ಯಾವುದಾಗಿರಬೇಕು ಎಂಬ ಗಮನ ಶಿಕ್ಷಕರಲ್ಲಿ ಇರಬೇಕು. ಮಾಗಡಿ ತಾಲೂಕಿನ ತೂಬಿನಕರೆ ಗ್ರಾಮದಲ್ಲಿನ ಶಾಲೆಯಲ್ಲಿ ಮುಖ್ಯ ಶಿಕ್ಷಕರೇ ಮಕ್ಕಳಿಗೆ ಡೇಂಜರ್ ಎನಿಸುವ ಕೆಲಸ ಮಾಡಿಸಿ, ಈಗ ಆಸ್ಪತ್ರೆ ಪಾಲಾಗುವಂತೆ ಮಾಡಿದ್ದಾರೆ.
3ನೇ ತರಗತಿಯ ಮಕ್ಕಳಿಗೆ ಕ್ಲೀನಿಂಗ್ ಮಾಡಲು ಬಿಟ್ಟರೆ, ಅದರಲ್ಲೂ ಶೌಚಾಲಯ ಸ್ವಚ್ಛ ಮಾಡಲು ಬಿಟ್ಟರೆ ಹೇಗೆ..? ಇಲ್ಲಿನ ಶಾಲೆಯ ಶಿಕ್ಷಕರು 3 ನೇ ತರಗತಿಯ ವಿದ್ಯಾರ್ಥಿನಿಯ ಕೈಗೆ ಬ್ಲಿಚಿಂಗ್, ಆ್ಯಸಿಡ್ ಕೊಟ್ಟು ಕ್ಲೀನ್ ಮಾಡುವುದಕ್ಕೆ ಕಳುಹಿಸಿದ್ದಾರೆ. ಆದರೆ ಕ್ಲೀನ್ ಮಾಡುವಾಗ ವಿದ್ಯಾರ್ಥಿನಿಗೆ ಪ್ರಜ್ಞೆ ತಪ್ಪಿದೆ.

ಶಿಕ್ಷಕಿ ಹೇಳಿದಂತೆ ಬ್ಲೀಚಿಂಗ್ ಪೌಡರ್ ಹಾಕಿ, ಆ್ಯಸಿಡ್ ಹಾಕಿ ಶೌಚಾಲಯ ಕ್ಲೀನ್ ಮಾಡಿದ್ದಾಳೆ. ಆದರೆ ಈ ವೇಳೆ ವಿದ್ಯಾರ್ಥಿನಿಗೆ ಅನಾರೋಗ್ಯ ಕಾಡಿದೆ. ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗಿದೆ. ಶಾಲೆಯಿಂದ ಆ ಶಿಕ್ಷಕನನ್ನು ಅಮಾನತು ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








