ಒಳ ಮೀಸಲಾತಿ ವರದಿ ಸಲ್ಲಿಕೆ : ನಾಗಮೋಹನ್ ದಾಸ್ ಹೇಳಿದ್ದೇನು..?

1 Min Read

ಬೆಂಗಳೂರು: ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಾಗಮೋಹನ್ ದಾಸ್ ವರದಿಯನ್ನು ಸಿಎಂಗೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ವರದಿಯನ್ನು ಸ್ವೀಕಾರ ಮಾಡಿದ್ದು, ಇನ್ನೇನಿದ್ರು ಸಂಪುಟದಲ್ಲಿ ಒಪ್ಪಿಗೆ ಸಿಗಬೇಕಿದೆ. ಕ್ಯಾಬಿನೇಟ್ ನಲ್ಲಿಯೂ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿದ್ದಾರೆ ಸಚಿವರು, ಶಾಸಕರು ಕೂಡ ಆತ್ಮವಿಶ್ವಾಸದಲ್ಲಿದ್ದಾರೆ.

ವರದಿಯನ್ನು ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಹೆಚ್.ಎನ್. ನಾಗಮೋಹನ್ ದಾಸ್ ಮಾತನಾಡಿ, 2025 ಜನವರಿ 1ನೇ ತಾರೀಖು. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ‌ಕಲ್ಪಿಸುವ ಬಗ್ಗೆ ಅಧ್ಯಯನ ಮಾಡಿ ಒಂದು ವರದಿ ಕೊಡಬೇಕು ಅಂತ ಕರ್ನಾಟಕ ಸರ್ಕಾರ ನನ್ನ ಅಧ್ಯಕ್ಷತೆಯಲ್ಲಿ ಒಂದು ಆಯೋಗವನ್ನು ರಚನೆ ಮಾಡಿತ್ತು. ಇದೇ 2025 ಮಾರ್ಚ್ 27ನೇ ತಾರೀಖು. ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂಬಂಧ ಪಟ್ಟಂತೆ ನಿಖರವಾದಂತ, ಸ್ಪಷ್ಟನೆ ಇರುವಂತ ದತ್ತಾಂಶ ಕೊರತೆ ಇದೆ. ಎಂವ ಕಾರಣವನ್ನು ನೀಡಿ, ಹೊಸದಾಗಿ ಒಂದು ಸಮೀಕ್ಷೆಯ ಅವಶ್ಯಕತೆ ಇದೆ ಅಂತ ಹೇಳಿ, ನಮ್ಮ ಆಯೋಗ ಒಂದು ಮಧ್ಯಂತರ ವರದಿಯನ್ನು ನೀಡಿತ್ತು.

ಅದೇ ದಿವಸ ರಾಜ್ಯ ಸಚಿವ ಸಂಪುಟ ತೀರ್ಮಾನ ಮಾಡಿ, ಹೊಸ ಸಮೀಕ್ಷೆ ನಡೆಸಲು ಅವಕಾಶ ಮಾಡಿಕಿಟ್ಟಿತು. ಮೇ 5 ರಿಂದ ಜುಲೈ 6 ನೇ ತಾರೀಖು ಅಂದ್ರೆ ಸುಮಾರು 60 ದಿವಸಗಳ ಕಾಲ ನಾವೂ ಸಮೀಕ್ಷೆಯನ್ನ ನಡೆಸಿದ್ದೇವೆ. ಈ ಸಮೀಕ್ಷೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ಆಪ್ ಬಳಸಿ ಅಮೀಕ್ಷೆ ನಡೆಸಿದ್ದೇವೆ. ರಾಜ್ಯದ ಪರಿಶಿಷ್ಟ ಜಾತಿಯ 27 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಕವರ್ ಆಗಿದೆ. 1 ಕೋಟಿ 7 ಲಕ್ಷ 9 ಸಾವಿರಕ್ಕಿಂತ ಅಧಿಕ ಜನ ಈ ಸಮೀಕ್ಷೆಯಲ್ಲಿ ದಾಖಲಾಗಿದೆ. ಇದೆಲ್ಲ ಪರಿಶೀಲನೆ ಮಾಡಿ 1766 ಪುಟಗಳ ವರದಿಯಮ್ನ ಸರ್ಕಾರಕ್ಕೆ ಸಲ್ಲಿಸಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *