ರಷ್ಯಾದ ಯುದ್ದೋನ್ಮಾದಕ್ಕೆ ಕನ್ನಡಿಗ ವಿದ್ಯಾರ್ಥಿ ಸಾವು…!

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ದಾಳಿಯಲ್ಲಿ ಕನ್ನಡಿಗರನ್ನ ಸುರಕ್ಷಿತವಾಗಿ ನಮ್ಮ ದೇಶಕ್ಕೆ ತರಲು ಭಾರತ ಸರ್ಕಾರ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದ್ರೆ ಈ ಮಧ್ಯೆ ಕನ್ನಡಿಗನೊಬ್ಬ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಇಂದು ಬೆಳಗ್ಗೆ ಉಕ್ರೇನ್ ಖಾರ್ಕೀವ್ ನಲ್ಲಿ ರಷ್ಯಾ ಶೆಲ್ ದಾಳಿ ನಡೆಸಿದೆ. ಈ ವೇಳೆ ಆ ದಾಳಿಗೆ ಸಿಲುಕಿ ಕನ್ನಡಿಗ ನವೀನ್ ಸಾವನ್ನಪ್ಪಿದ್ದಾರೆ. ನವೀನ್ ಮೂಲತಃ ಹಾವೇರಿಯ ಚಣಗೇರಿ ಗ್ರಾಮದವರು. ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ಹೋಗಿದ್ದರು. ಅಗತ್ಯ ವಸ್ತುಗಳಿಗಾಗಿ ಹೊರಗೆ ಬಂದಾಗ ಶೆಲ್ ದಾಳಿಯಲ್ಲಿ ನವೀನ್ ಮೃತಪಟ್ಟಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ, ಭಾರತೀಯ ವಿದ್ಯಾರ್ಥಿಯೋರ್ವ ಖಾರ್ಕೀವ್ ನಲ್ಲಿ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಯ ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇವೆ. ವಿದ್ಯಾರದಥಿಯ ನಿಧನಕ್ಲೆ ಸಚಿವಾಲಯ ಸಂತಾಪ ಸೂಚಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಅವರ ಕುಟುಂಬಸ್ಥರಿಗೆ ನವೀನ್ ಅವರೇ ಮೃತಪಟ್ಟಿರುವ ಬಗ್ಗೆ ಸ್ಟುಡೆಂಟ್ ಕಂಟ್ರಾಕ್ಟರ್ ಹಾಗೂ ಸ್ನೇಹಿತರು ಕನ್ಫರ್ಮ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *