Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವಮೊಗ್ಗದಲ್ಲಿ ಜಾಂಡೀಸ್ ಹೆಚ್ಚಳ : ಅಕ್ಕ ಪಕ್ಕದ ಊರುಗಳಿಗೆ ಎಚ್ಚರಿಕೆ..!

Facebook
Twitter
Telegram
WhatsApp

ಶಿವಮೊಗ್ಗ: ಮಳೆಗಾಲ, ಚಳಿಗಾಲದಲ್ಲಿ ಒಂದಷ್ಟು ವೈರಸ್ ಗಳ ಹೆಚ್ಚಳದಿಂದ ಶೀತ, ನೆಗಡಿ, ಜ್ವರದಂತ ರೋಗಗಳು ಕಾಡುತ್ತವೆ. ನೀರನ್ನ ಒಂದೇ ಕಡೆ ಸಂಗ್ರಹಿಸಿದರೆ, ಸೊಳ್ಳೆಗಳ ಉತ್ಪತ್ತಿಯಿಂದ ಡೆಂಗ್ಯೂ ತಗಲುತ್ತದೆ. ಆದರೆ ನೀರು ಕಲುಷಿತಗೊಂಡರೆ ಅದರಿಂದ ಬೇರೆ ಸಮಸ್ಯೆಗಳು ಹೆಚ್ಚಾಗುತ್ತವೆ. ಇದೀಗ ಶಿವಮೊಗ್ಗದಲ್ಲಿ ಜಾಂಡೀಸ್ ಸಮಸ್ಯೆ ಉಲ್ಬಣವಾಗುತ್ತಿದೆ. ಇದರಿಂದ ಜನ ಆತಂಕಗೊಂಡಿದ್ದಾರೆ.

ಡೆಂಗ್ಯೂ, ಝೀಕಾ ಅಂತ ತತ್ತರಿಸಿದ್ದ ಜನತೆಗೆ ಈಗ ಜಾಂಡೀಸ್ ತಲೆ ಬಿಸಿ ಮಾಡಿದೆ. ಆರೋಗ್ಯ ಇಲಾಖೆಯಿಂದ ಜಾಂಡೀಸ್ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ದಿನೇ ದಿನೇ ಜಾಂಡೀಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಾಂಡೀಸ್ ಪತ್ತೆಯಾದವರ ವಿವರವನ್ನು ಸರಿಯಾಗಿ ಪಾಲಿಸದ ಕಾರಣ, ಮತ್ತೆ ಮತ್ತೆ ಸೋಂಕು ಹೆಚ್ಚಾಗುತ್ತಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಜಾಂಡೀಸ್ ಸೋಂಕಿತರು ದಾಖಲಾಗಿರುವುದು.

ಇನ್ನು ಜಾಂಡೀಸ್ ಬರಲು ಕಾರಣ, ಕಲುಷಿತ ನೀರು ಕುಡಿಯುವುದರಿಂದ, ಕಲುಷಿತ ಆಹಾರವನ್ನು ಸೇವನೆ ಮಾಡುವುದರಿಂದ ವೈರಸ್ ದೇಹವನ್ನು ಸೇರುತ್ತದೆ. ರಕ್ತ ವರ್ಗಾವಣೆ, ಬಳಸಿದ ಸಿರಿಂಜ್ ಬಳಕೆ, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾನೂ ಜಾಂಡೀಸ್ ಬರಲಿದೆ. ಕೆಂಪು ರಕ್ತ ಕಣಗಳ ವಿಭಜನೆಯಿಂದ ಉತ್ಪತ್ತಿಯಾದ ಹಳದಿ, ಕೇಸರಿ ಬಣ್ಣ ಮಿಶ್ರಣದ ಹೆಚ್ಚುವರಿ ಬೈಲುರುಬಿನ್‌ನಿಂದ ಕಾಮಾಲೆ ರೋಗ ಬರುತ್ತದೆ. ಆರೋಗ್ಯವಂತ ಮನಷ್ಯನಲ್ಲಿ ಈ ಪ್ರಮಾಣ 0.2 ನಿಂದ 0.8 ಇರಬೇಕು. ಇದಕ್ಕಿಂತ ಹೆಚ್ಚಾದರೆ ಜಾಂಡಿಸ್‌ ಕಾಯಿಲೆ ಬಂದಿದೆ ಎಂದರ್ಥ. ಇದು ಯಕೃತಿನ ಹಾನಿಗೆ ನೇರ ಕಾರಣವಾಗುತ್ತದೆ. ಸೋಂಕಿನ ಪ್ರಮಾಣ ತೀವ್ರವಾದಂತೆ ರೋಗಿಯ ಕಣ್ಣು ಹಳದಿಯಾಗುವ ಜತೆಗೆ ಮೂತ್ರ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM’

  ಬೆಂಗಳೂರು: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ ARM ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ. ಬಿಡುಗಡೆಯಾದ 4

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭ..!

  ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು

ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ : ರಾಜ್ಯಾಧ್ಯಕ್ಷರ ಮೇಲೆ ಕಿಡಿಕಾರಿದ ರಮೇಶ್ ಜಾರಕಿಹೊಳಿ

  ಬೆಳಗಾವಿ: ಯಡಿಯೂರಪ್ಪ ಅವರಿಗೆ ನಾನು ವಿರೋಧಿಯಲ್ಲ. ಯಡಿಯೂರಪ್ಪ ಅವರು ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ವಿಜಯೇಂದ್ರ ನಮ್ಮ‌ ಪಕ್ಷದ ನಾಯಕನಲ್ಲ. ಬಿಜೆಪಿಯಲ್ಲಿಯೇ ಭ್ರಷ್ಟ

error: Content is protected !!