ಚಿಕ್ಕಮಗಳೂರಿನಲ್ಲಿ ಕೊಳಕು ಮಂಡಲ ಹಾವನ್ನೇ ಹಿಡಿದು ಬಂದ ವ್ಯಕ್ತಿ..!

suddionenews
0 Min Read

ಚಿಕ್ಕಮಗಳೂರು: ಕಚ್ಚಿದ ಕೊಳಕು‌ ಮಂಡಲ ಹಾವನ್ನೇ ಹಿಡಿದುಕೊಂಡು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದಿರುವ ಘಟನೆ ತರಿಕೆರೆ ಆಸ್ಪತ್ರೆಯಲ್ಲಿ ನಡೆದಿದೆ. ಕೊಲ್ಕತ್ತ ಮೂಲದ ಆಸೀಫ್ ನಿವಾಸಿ ಹೀಗೆ ಹಾವಿಡಿದುಕೊಂಡು ಬಂದ ವ್ಯಕ್ತಿಯಾಗಿದ್ದಾರೆ.

ಆಸೀಫ್ ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಬಂದಿದ್ದರು. ತರಿಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ಮಾಡಲು ಬಂದಿದ್ದರು. ಕೆಲಸ ಮುಗಿದ ಮೇಲೆ ಊರಿಗೆ ಹೋಗುವುದಕ್ಕೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಆಗ ಹಾವು ಕಚ್ಚಿದೆ. ಆದರೆ ಆ ಹಾವಿಗೆ ಭಯ ಪಡದೆ, ಅದೇ ಹಾವನ್ನು ಕೈನಲ್ಲಿಡಿದುಕೊಂಡು ನೇರವಾಗಿ ಆಸ್ಪತ್ರೆಗೆ ಬಂದಿದ್ದಾನೆ. ಸದ್ಯ ಆಸೀಫ್ ಗೆ ವೈದ್ಯರು ಚಿಕಿತ್ಸೆ ನೀಡಿದ್ದು, ವಿಷ ತೆಗೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *