ದೆಹಲಿಯಿಂದ ಒಪ್ಪಿಗೆ ಸಿಕ್ಕರೆ ಕರೆತರುವುದು ಒಂದು ದಿನದ ಕೆಲಸ : ಬಿಎಲ್ ಸಂತೋಷ್ ಹೇಳಿದ್ದೇನು..?

suddionenews
1 Min Read

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಹಸ್ತದ ಸದ್ದು ಜೋರಾಗಿರಯವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನನ್ನ ಸಂಪರ್ಕದಲ್ಲಿಯೇ 40-45 ಜನ ಇದ್ದಾರೆ. ದೆಹಲಿಯಿಂದ ಒಪ್ಪಿಗೆ ಸಿಕ್ಕರೆ ನಾಳೆ ಒಂದೇ ದಿನದ ಕೆಲಸ ಎಂದಿದ್ದಾರೆ.

ಬಿಜೆಪಿಯಿಂದ ಯಾರೂ ಕೂಡ ಕಾಂಗ್ರೆಸ್ ಗೆ ಹೋಗೋದಿಲ್ಲ. ಬಾಂಬೆ ಬಾಯ್ಸ್ ಎಂದು ಕರೆಯಲಾಗುತ್ತಿರುವ, ಅಂದು ನಮ್ಮ ಜೊತೆ ಬಂದವರನ್ನು ನಾವೇ ಹಾಗೆಲ್ಲ ಹೇಳುವುದು ಬೇಡ. ಕಷ್ಟ ಕಾಲಕ್ಕೆ ಅವರು ನಮ್ಮ ಜತೆ ಬಂದಿದ್ದಾರೆ. ಅವರು ಹೋಗುತ್ತಾರೆ ಎಂದು ನಾವೇ ಹೇಳುವುದು ಸರಿಯಲ್ಲ. ಬಿಟ್ಟು ಹೋಗುವವರ ಚಿಂತೆ ನಮಗೆ ಬೇಡ. ಅಷ್ಟಕ್ಕೂ ಯಾರೂ ಕೂಡ ನಮ್ಮ ಪಕ್ಷ ಬಿಟ್ಟು ಹೋಗಲ್ಲ. 10 ಜನ ಹೋದರೂ ಅದಕ್ಕೆ ಸಮಾನವಾದ ಒಬ್ಬರನ್ನು ಕರೆತರಬಹುದು. ಆದರೆ ಅದರ ಅಗತ್ಯ ನಮಗಿಲ್ಲ. ನಾವೇನು ಈಗ ಸರ್ಕಾರ ಮಾಡಬೇಕಾಗಿಲ್ಲ.

ಪ್ರತಿಪಕ್ಷ ನಾಯಕನ ಆಯ್ಕೆಯೇ ಆಗಿಲ್ಲ ಎಂದು ದೊಡ್ಡದು ಮಾಡಿ ಚರ್ಚಿಸುವ ಅಗತ್ಯವೇನಿದೆ. ಮನೆಯಲ್ಲಿ ಮದುವೆಯಾಗದ ಮಗಳು ಇದ್ದರೆ, ಕೆಲಸ ಸಿಗದ ಮಗ ಇದ್ದರೆ ಹೊರಗೆ ಹಾಕಲು ಆಗುತ್ತಾ..? ತೆವಾಗಿರುವುದು ಎಷ್ಟು ಸತ್ಯವೋ ನೇಮಕವಾಗುವುದು ಅಷ್ಟೇ ಸತ್ಯ ಎಂದುದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *