ಬೆಂಗಳೂರು; ರಾಜ್ಯದಲ್ಲಿ ಸದ್ಯಕ್ಕೆ ಜಾತಿಗಣತಿ ವರದಿಯದ್ದೇ ಸದ್ದು ಗದ್ದಲ. ವಿರೋಧ ಮಾಡುವವರೇ ಹೆಚ್ಚಾಗಿದ್ದಾರೆ. ಲಿಂಗಾಯತ ಸಮುದಾಯ ಮುಸ್ಲಿಂ ಸಮುದಾಯಕ್ಕಿಂತ ಕಡಿಮೆ ಸಂಖ್ಯೆಯನ್ನ ತೋರಿಸಲಾಗಿದೆ. ಆದರೆ ಅದು ವೀರಶೈವ ಬೇರೆ ಆಗಿರುವ ಕಾರಣ. ಇದಿಒಗ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತರನ್ನು ಎದುರಾಕಿಕಿಂಡು ಸರ್ಕಾರ ನಡೆಸಲು ಸಾಧ್ಯವಾ ಎಂದು ಹೇಳಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಒಕ್ಕಲಿಗರ ನೇತೃತ್ವದಲ್ಲೂ ಒಂದು ಮೀಟಿಂಗ್ ನಡೆದಿದೆಯಲ್ಲ ಸರ್ ಎಂದು ಕೇಳಿದಾಗ, ಮಾಡಲಿ. ಅವರು ಕೂಡ ನಾಳೆ ಅಭಿಪ್ರಾಯವನ್ನು ತಿಳಿಸಬೇಕು ಅಲ್ವಾ. ಐದು ಜನ ಇದ್ದಾರೆ ಒಕ್ಕಲಿಗ ಅಭಿವೃದ್ಧಿಯಲ್ಲಿ. ಅವರವರ ಅಭಿಪ್ರಾಯ ಹೇಳಬೇಕಲ್ವಾ.
ಲಿಂಗಾಯತ ಮತ್ತು ಒಕ್ಕಲಿಗರಿಲ್ಲದೆ ರಾಜ್ಯಭಾರ ಮಾಡುವುದಕ್ಕೆ ಸಾಧ್ಯವಾ ಎಂಬ ಶಾಮನೂರು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನವರು, ಇದು ಸೋಷಿಯಲ್ ಎಕಾನಾಮಿಕ್ ಸರ್ವೇ. ಯಾರಿಗೂ ಅನ್ಯಾಯ ಆಗಲ್ಲ. ಅನ್ಯಾಯ ಆಗೋದಕ್ಕೆ ಬಿಡಲ್ಲ ಎಂದಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಮೀಕ್ಷೆ ಏನಿದೆ ಅದು ಜಾತಿಗಣತಿ ಅಲ್ಲ. ಪದೇ ಪದೇ ಹೇಳ್ತಾ ಇದ್ದೀನಿ. ಇದನ್ನ ಸಾರ್ವಜನಿಕರು ಗೊಂದಲ ಮಾಡಿಕೊಳ್ಳೋದು ಬೇಡ. ಸಮೀಕ್ಷೆ ಹಿಂದುಳಿದ ವರ್ಗದಲ್ಲಿ ಇರುವಂತ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಎತ್ತಿ ಹಿಡಿಯುವಂತ ಕೆಲಸ ಮಾಡಬೇಕಾಗಿರುವ ಸಮೀಕ್ಷೆ ಇದು. ವೈಜ್ಞಾನಿಕವಾಗಿ ಆಗಿದೆಯೋ, ಅವೈಜ್ಞಾನಿಕವಾಗಿ ಆಗಿದೆಯೋ ಆ ಸ್ಪಷ್ಟನೆ ನಾಳೆ ಕ್ಯಾಬಿನೆಟ್ ನಲ್ಲಿ ಆಗುತ್ತೆ. ಯಾಕಷ್ಟು ಅವಸರ. ಅದರಲ್ಲಿರುವ ಸಂಪೂರ್ಣ ಮಾಹಿತಿ ನೋಡಿದ ಬಳಿಕ ವಿರೋಧ ಮಾಡಲಿ. ಯಾಕಷ್ಟು ಆತಂಕ, ಆತುರದಲ್ಲಿದ್ದಾರೆ ಎಲ್ಲರು. ಯಾವುದೇ ಸಮುದಾಯಗಳಿಗೆ ಲೋಪ ಆಗುತ್ತೆ ಅದನ್ನ ತಿದ್ದಿಕೊಳ್ಳುವ ಪ್ರಯತ್ನವಾಗಲಿದೆ. ಲಿಂಗಾಯತರು, ಒಕ್ಕಲಿಗರು, ದಲಿತರನ್ನು ಎದುರಾಕಿಕೊಳ್ಳುವ ಪ್ರಶ್ನೆ ಇಲ್ಲಿ ಬರಲ್ಲ. ಮೊದಲು ಎಲ್ಲದಕ್ಕೂ ದತ್ತಾಂಶ ಬೇಕಲ್ವಾ. ಅದನ್ನೇ ಮಾಡ್ತಾ ಇರೋದು ಈಗ ಎಂದಿದ್ದಾರೆ.















