ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಹೃದಯ ಚೆನ್ನಾಗಿದ್ದರೆ ನಮ್ಮ ದೇಹ ಚೆನ್ನಾಗಿರುತ್ತದೆ. ಹೃದಯದ ಬಡಿತ ಚೆನ್ನಾಗಿದ್ದರೆ ಆರೋಗ್ಯವಾಗಿ ಜೀವಿಸುತ್ತೀವಿ. ಹೃದಯ ಬಡಿತವೇ ನಿಂತರೆ, ಯಾರು ಎಷ್ಟೇ ಕೂಗಿದರೂ ಕೇಳಿಸದಷ್ಟು ದೂರಕ್ಕೆ ಸಂಚಾರ ಮಾಡಿ ಬಿಡುತ್ತೀವಿ. ಹೃದಯಕ್ಕೆ ಮಾತ್ರವಲ್ಲ ನಮ್ಮ ದೇಹಕ್ಕೆ ರಕ್ತ ಸಂಚಾರ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಎಲ್ಲಾ ಕಡೆಗೂ ರಕ್ತ ಸರಿಯಾದ ರೀತಿಯಲ್ಲಿ ಸಂಚಲನವಾಗುತ್ತಿದ್ದರೆ, ದೇಹ ಆರೋಗ್ಯದಿಂದ ಇರುತ್ತದೆ. ಒಂದು ವೇಳೆ ರಕ್ತ ಸಂಚಲನ ಆಗುತ್ತಿಲ್ಲ ಎಂದಾದರೇ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ನೆಗ್ಲೆಕ್ಟ್ ಮಾಡಬೇಡಿ.

ಒಂದು ವೇಳೆ ದೇಹದಲ್ಲಿ ರಕ್ತ ಸಂಚಲನ ಕಡಿಮೆಯಾದರೆ ದೇಹದ ಕಾಲುಗಳು, ಬೆರಳುಗಳು, ಪಾದಗಳಲ್ಲೆಲ್ಲಾ ಕಾಣಿಸಿಕೊಳ್ಳುತ್ತದೆ. ನಡೆಯುವಾಗ ಸ್ನಾಯುಗಳಲ್ಲೆಲ್ಲಾ ನೋವು ಕಂಡು ಬರುವುದು. ಸೂಜಿಯಲ್ಲಿ ಚುಚ್ಚಿದ ಅನುಭವವಾಗುವುದು. ಬೆರಳುಗಳು ತಣ್ಣಗಾಗುವುದು. ತ್ವಜೆ ತಿರುಚಿಕೊಳ್ಳುವಂತೆ ಆಗುವುದು. ಎದೆಯಲ್ಲಿ ನೋವು, ಕೈಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.
ದೇಹದ ರಕ್ತಸಂಚಾರ ಕಡಿಮೆಯಾದರೆ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಷ್ಟಕ್ಕೂ ಅದಕ್ಕೆ ಕಾರಣಗಳೇನು ಅನ್ನೋದನ್ನು ನೋಡೋದಾದ್ರೆ, ಅತ್ಯಧಿಕ ಧೂಮಪಾನ ಮಾಡುವವರಲ್ಲಿ, ಸತ್ಯಧಿಕ ಒತ್ತಡ ಇರುವವರಲ್ಲಿ ಇಂತಹ ಲಕ್ಷಣಗಳು ಕಾಣಿಸುತ್ತವೆ. ಹಾಗೇ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾದರೆ, ನರಗಳಿಗೆ ಹಾನಿಯುಂಟಾದವರಿಗೆ, ಮಧುಮೇಹಿಗಳಿಗೆ, ಸಂಧಿವಾತ ಸಮಸ್ಯೆ ಇರುವವರಿಗೆ ರಕ್ತದ ಸಂಚಾರದಲ್ಲಿ ವ್ಯತ್ಯಯ ಕಂಡು ಬರುತ್ತದೆ.
ಒಂದು ವೇಳೆ ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗಿದೆ ಎಂದು ನಿಮಗೆ ಎನಿಸಿದರೆ ಈ ರೀತಿ ಮಾಡಿ, ಬೈಪಾಸ್ ಮಾಡವ ಮೂಲಕ ನರಗಳಲ್ಲಿನ ಬ್ಲಾಕ್ ತೆಗೆಯಬಹುದು. ಹೆಪ್ಪುಗಟ್ಟಿದ ರಕ್ತವನ್ನು ತೆಗೆಸಿಕೊಳ್ಳಬೇಕು. ಹೀಗಾಗಿ ಸೂಕ್ತವಾದ ವೈದ್ಯರನ್ನು ಭೇಟಿ ಮಾಡಿ, ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್