ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನ ಎದುರಿಸುತ್ತಿವೆ. ಆದ್ರೆ ಕೆಲವೊಂದು ಹೇಳಿಕೆಗಳು ಮೈತ್ರಿಯಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಜೆಡಿಎಸ್ ಪಕ್ಷ 113 ಸೀಟ್ ಗಳನ್ನ ಗೆದ್ದರೆ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಬಹುದು. ಅದನ್ನ ತಡೆಯಲು ನಾವ್ಯಾರು ಅಂತ ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಹಾಗೇ ಬಿಜೆಪಿ 113 ಗೆದ್ದರೆ ನಮ್ಮವರೇ ಸಿಎಂ ಆಗ್ತಾರೆ ಎಂದಿದ್ದಾರೆ. ಚಲವಾದಿ ನಾರಾಯಣಸ್ವಾಮಿ ಅವರ ಈ ಹೇಳಿಕೆ ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೈತ್ರಿ ಅಂದ್ಮೇಲೆ ಅಪಸ್ವರಗಳು ಬರುವುದು ಸಹಜ. ವರಿಷ್ಠರು ಕುಳಿತುಕೊಂಡು ತೀರ್ಮಾನ ಮಾಡ್ತಾರೆ. ವರಿಷ್ಠರ ತೀರ್ಮಾನದಮನತೆ ಎಲ್ಲವೂ ನಡೆಯುತ್ತದೆ ಎಂಬ ಮಾತನ್ನ ಚಲವಾದಿ ನಾರಾಯಣಸ್ವಾಮಿ ಅವರು ಅವರ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.
ಪಾರ್ಲಿಮೆಂಟ್ ನಲ್ಲಿ ಅವರು ಅಲಿಯೆನ್ಸ್ ಮಾಡಿಕೊಂಡಿದ್ದರು. ಈ ಮೈತ್ರಿ ಯಾವುದನ್ನೇ ಆಗಲಿ ಕೇಂದ್ರದ ನಾಯಕರು ನಿರ್ಧಾರ ಮಾಡ್ತಾರೆ. ಜನತಾದಳ ನಮ್ಮನ್ನಾಗಲಿ, ನಾವೂ ಅವರನ್ನಾಗಲೀ ಯಾವುದೇ ರೀತಿಯಲ್ಲಿ ಮಾತನ್ನಾಡುವುದು ಸೂಕ್ತವಲ್ಲ. ನಾವೂ ಅವರನ್ನೆಷ್ಟು ಗೌರವಿಸ್ತಿವೋ ಅವರು ನಮ್ಮನ್ನು ಅಷ್ಟೇ ಗೌರವಿಸಬೇಕು. ಎಲ್ಲದಕ್ಕಿಂತ ಮಿಗಿಲಾಗಿ ಟಿಕೆಟ್ ಯಾರು ಕೂಡ ಲೋಕಲ್ ನಲ್ಲಿ ಇಲ್ಲ. ಭಾರತೀಯ ಜನತಾ ಪಕ್ಷದ ಎಲ್ಲಾ ತೀರ್ಮಾನಗಳು ಮೇಲ್ಮಟ್ಟದಲ್ಲಿ ನಡೆಯುತ್ತವೆ. ಜನತಾ ದಳದ ವಿಚಾರಗಳು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಅವರ ಎತ್ತರದಲ್ಲಿ ಅವರು ನಡೆಸ್ತಾರೆ. ಯಾವುದೋ ಸಣ್ಣ ಪುಟ್ಟ ಸಮಸ್ಯೆಗಳನ್ನ ಇಟ್ಟುಕೊಂಡು ಸ್ಥಳೀಯವಾಗಿ ಇವರಿಗೆ ಟಿಕೆಟ್ ಅಂತ ಹೇಳುವುದು ಸರಿಯಲ್ಲ ಎಂದಿದ್ದಾರೆ.


