ಧರ್ಮದ ವಿಚಾರವಾಗಿ ಯಾವತ್ತೂ ಕೈ ಹಾಕಬಾರದು ಎಂದಿದ್ದೆ : ಡಿಕೆ ಶಿವಕುಮಾರ್

1 Min Read

 

ಬೆಂಗಳೂರು: ಲಿಂಗಾಯತ ಧರ್ಮ ವಿಭಜನೆಗೆ ಸಿದ್ದರಾಮಯ್ಯ ಪಶ್ಚತ್ತಾಪ ಪಟ್ಟ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮನುಷ್ಯ ತಪ್ಪು ಮಾಡಿದರೆ ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾವ್ಯಾರು ದೇವರು ಅಲ್ಲ. ತಪ್ಪು ಮಾಡಿದಾಗ ದೇವರು ಕೂಡ ಒಪ್ಪಿಕೊಂಡಿದ್ದಾರೆ. ಅವತ್ತು ನಾನು ಕ್ಯಾಬಿನೇಟ್ ನಲ್ಲಿದ್ದೆ. ನಾನು ಕೂಡ ವಿರೋಧಿಸಿದ್ದೆ. ಸಿದ್ದರಾಮಯ್ಯ ಅವರು ನಿನ್ನೆ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಎಲ್ಲಾ ಧರ್ಮಗಳ ಆಶೀರ್ವಾದ ನಮಗೆ ಬೇಕು.

ಸ್ವಾಮೀಜಿ ಮತ್ತು ಸಿದ್ದರಾಮಯ್ಯ ಅವರ ನಡುವೆ ಏನು ಸಂಭಾಷಣೆ ನಡೆದಿದೆ ಆ ಬಗ್ಗೆ ನನಗೆ ಗೊತ್ತಿಲ್ಲ. ಪದರತ್ಯೇಕ ಧರ್ಮದ ವಿಚಾರವಾಗಿ ಬಹಿರಂಗವಾಗಿ ಕ್ಷಮೆ ಕೇಳಿದ್ದೆ. ಧರ್ಮದ ವಿಚಾರವಾಗಿ ಯಾವತ್ತೂ ಕೈ ಹಾಕಬಾರದು ಎಂದು ಹೇಳಿದ್ದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *