ಮಂಡ್ಯ: ಬಿಜೆಪಿಗೆ ಬೇರೆ ಕೆಲಸ ಏನಿದೆ. ಅವರು ಯಾವತ್ತಾದ್ರು ಇಂಥ ಅಭಿವೃದ್ಧಿ ಕೆಲಸ ಮಾಡಿದರೂ ಅಂತ ಹೇಳಿಕೊಳ್ತಾರಾ..? ನಾವೂ ಗಂಟಾಘೋಷವಾಗಿ ಹೇಳ್ತೇವೆ ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ ಸಿಎಂ ಆಗಿದ್ರು, ಇಂಥ ಭಾಗ್ಯಗಳನ್ನ ಕೊಟ್ರು. ಈಗ ನಮ್ಮದೆ ಸರ್ಕಾರವಿದೆ. ನಾವಿಂಥ ಕಾರ್ಯಕ್ರಮಗಳನ್ನು ಕೊಡ್ತೇವೆ ಅಂತೀವಿ. ಬಿಜೆಪಿಯವರು, ನಮ್ಮ ರಾಜ್ಯದ ಬಗ್ಗೆ ಅಷ್ಟೇ ಮಾತನಾಡ್ತಿಲ್ಲ, ಇಡೀ ದೇಶದಲ್ಲಿ ಅವರು, ಕಾರ್ಯಕ್ರಮವನ್ನ ತೋರಿಸಿ ಮಾತನಾಡಿದ್ದಾರಾ..? ಅದು ಸೊನ್ನೆ. ಬರೀ ಅವರಿಗೆ ಏನು ಹಿಂದೂ – ಮುಸಲ್ಮಾನ್ ಅಷ್ಟೇ.
ಈಗ ನವೆಂಬರ್ ನಲ್ಲಿ ಸಿಎಂ ಡೇಟ್ ಕೊಟ್ಟಿದ್ದಾರೆ. 42,345 ಮನೆಗಳನ್ನ ಕೊಡ್ತಾ ಇದ್ದೇವೆ. ಯಾಕೆ ಇದನ್ನ ಬಿಜೆಒಇಯವರು ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಏನಾದ್ರೂ ಬಿಜೆಪಿಯವರು ಸ್ಲಂ ಬೋರ್ಡ್ ನಲ್ಲಿ, ರಾಜೀವ್ ಗಾಂಧಿಯಲ್ಲಿ ಏನಾದ್ರು ಒಂದು ಮನೆ ಬಿಜೆಪಿಯವರು ಕೊಟ್ಟಿದ್ರೆ ದೇವ್ರಾಣೆ ಹೇಳ್ತೀನಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಅಶೋಕ್ ಇಷ್ಟೆಲ್ಲ ಮಾತಾಡ್ತಾರಲ್ಲ ನಾನು ಚಾಲೆಂಜ್ ಮಾಡ್ತೀನಿ. ನಾಳೆನೆ ರಾಜಕೀಯ ತೆಗೆದುಕೊಳ್ತೀನಿ.
ಅಶೋಕ್ ಅವರಿಗೂ ಹೇಳ್ತಾ ಇದ್ದೀನಿ, ವಿಜಯೇಂದ್ರ ಅವರಿಗೂ ಹೇಳ್ತಾ ಇದ್ದೀನಿ. 19-23 ವರೆಗೂ ಅವರೇ ಇದ್ರಲ್ಲ, ಏನಾದ್ರೂ ಒಂದೇ ಒಂದು ಮನೆ ಕೊಟ್ಟಿದ್ರೆ ಸಾಬೀತು ಮಾಡಲಿ. ಇವತ್ತು ಸಾಬೀತು ಮಾಡಿದ್ರೆ ನಾಳೆಯೇ ರಾಜೀನಾಮೆ ಕೊಡ್ತೀನಿ. ಇಲ್ಲ ಇವತ್ತು ಸಾಬೀತು ಮಾಡಿದ್ರೆ ಇವತ್ತು ಸಂಜೆಯೇ ರಾಜೀನಾಮೆ ನೀಡುತ್ತೀನಿ. ಬೇರೆಯವರ ರೀತಿ ನಾನಲ್ಲ. ಡಂಗ್ ಹೊಡೀತಾರಲ್ಲ ಆ ಥರದ ವ್ಯಕ್ತಿ ನಾನಲ್ಲ. ಸಾಬೀತು ಮಾಡಿದ ತಕ್ಷಣ ಇವತ್ತು ಸಂಜೆಯೇ ರಾಜ್ಯಪಾಲರ ಮನೆಗೆ ಹೋಗಿ ರಾಜೀನಾಮೆ ಕೊಟ್ಟು ಬರ್ತೀನಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.






