ಇಸ್ಲಾಂ ಧರ್ಮಕ್ಕೂ ಮತಾಂತರಗೊಂಡಿದ್ದೆ.. ಮಗು ತೆಗೆಸುವ ವಿಚಾರದಲ್ಲಿ ಗಲಾಟೆ : ನಟಿ ದಿವ್ಯಾ ಶ್ರೀಧರ್ ನೋವಿನ ಮಾತು

1 Min Read

 

ನಟಿ ದಿವ್ಯಾ ಶ್ರೀಧರ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಡ ಹೆಂಡತಿ ನಡುವೆ ನಡೆದ ಜಗಳ ಹಲ್ಲೆ ಮಾಡುವ ತನಕ ಮುಟ್ಟಿದೆ. ಈ ಕಾರಣಕ್ಕಾಗಿಯೇ ದಿವ್ಯಾ ಆಸ್ಪತ್ರೆಯಲ್ಲಿದ್ದಾರೆ. ಈಗಾಗಲೇ ಗಂಡನ ವಿರುದ್ಧ ದೂರ ದಾಖಲಿಸಿದ್ದಾರೆ.

ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿರುವ ದಿವ್ಯಾ, ನಟ ಅಮ್ಜಾದ್ ಖಾನ್ ಜೊತೆ ಮದುವೆಯಾಗಿರುವುದಾಗಿ ಹೇಳಿದ್ದಾರೆ. ತಮಿಳು ಮಾಧ್ಯಮವೊಂದಕ್ಕೆ ಮಾತನಾಡಿದ್ದು, ನಾವಿಬ್ಬರು ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದೆವು. ಮೊದಲಿಗೆ ಅವರು ಮುಸ್ಲಿಂ ಎಂದು ತಿಳಿದಿರಲಿಲ್ಲ. ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದೆವು. ಬಳಿಕ ಅವರಿಗಾಗಿ ನಾನು ಇಸ್ಲಾಂ ಧರ್ಮಕ್ಕೂ ಮತಾಂತರಗೊಂಡಿದ್ದೆ. ಹಿಂದೂ ಸಂಪ್ರದಾಯದಂತೆ ಕೂಡ ಮದುವೆಯಾಗಿದ್ದೇವೆ. ಕಂಚಿಯಲ್ಲಿ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದೆವು.

ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾಗ ಅದನ್ನು ತೆಗೆಯುವಂತೆ ಒತ್ತಾಯಿಸಿದರು. ನನ್ನ ಕೆರಿಯರ್ ಹಾಳಾಗುತ್ತೆ ಎಂದರು. ಯಾರಾದರೂ ಕೇಳಿದರೆ ಜಾಹೀರಾತಿಗಾಗಿ ಮಾಡಿದ ಶೂಟ್ ಅಂತ ಹೇಳು ಎಂದಿದ್ದರು. ಬಳಿಕ ಗರ್ಭೀಣಿಯಾದಾಗ ದೂರ ಸರಿಯಲು ಪ್ರಯತ್ನಿಸಿದರು. ಮಗು ತೆಗೆಸುವ ವಿಚಾರಕ್ಕೆ ಗಲಾಟೆಯಾಗಿ ಹಲ್ಲೆ ಮಾಡಿದ್ದಾರೆಂದು ದಿವ್ಯಾ ಶ್ರೀಧರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *