Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

HSRP ಪ್ಲೇಟ್ ಹಾಕ್ಸಿಲ್ಲ ಅಂದ್ರೆ ದಂಡ ಗ್ಯಾರಂಟಿ : ಸಾರಿಗೆ ಸಚಿವರಿಂದ ಮಹತ್ವದ ನಿರ್ಧಾರ..!

Facebook
Twitter
Telegram
WhatsApp

ಬೆಂಗಳೂರು: ಈಗಾಗಲೇ HSRP ಪ್ಲೇಟ್ ಅಳವಡಿಸಲು ಸಾಕಷ್ಟು ಬಾರಿ ಸಮಯ ವಿಸ್ತರಣೆ ಮಾಡಲಾಗಿದೆ. ಐದು ಬಾರಿ ಗಡುವು ನೀಡಿದ ಸರ್ಕಾರ ಕೊನೆಯದಾಗಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಒಂದು ವೇಳೆ ಅಕ್ಟೋಬರ್ ವೇಳೆಗೆ HSRP ಪ್ಲೇಟ್ ಹಾಕಿಸದೆ ಹೋದಲ್ಲಿ ದಂಡ ಪ್ರಯೋಗ ಮಾಡಲು ಮುಂದಾಗಿದೆ.

ಶೀಘ್ರದಲ್ಲಿಯೇ 500 ರಿಂದ 1000 ರೂಪಾಯಿ ತನಕ ದಂಡ ವಿಧಿಸಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ 2 ಕೋಟಿಗೂ ಅಧಿಕ ಹಳೆಯ ವಾಹನಗಳಿವೆ. ಆ ಪೈಕಿ ಕೇವಲ 53,00,000 ಲಕ್ಷ ವಾಹನಗಳಿಗೆ ಮಾತ್ರ HSRP ಪ್ಲೇಟ್ ಅಳವಡಿಕೆ ಮಾಡಲಾಗಿದೆ‌. ಆದರೆ ಎಲ್ಲಾ ಹಳೆಯ ವಾಹನಗಳಿಗೆ HSRP ಪ್ಲೇಟ್ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಕಡ್ಡಾಯಗೊಳಿಸಿದರೂ ಕೂಡ ಗಡುವು ವಿಸ್ತರಣೆ ಮಾಡಿಕೊಂಡೆ ಬರಲಾಗಿದೆ. ಈ ಬಾರಿ ಹೈಕೋರ್ಟ್ ನಿಂದ ಕೂಡ ಆದೇಶ ಹೊರಬಿದ್ದಿದ್ದು, ಅಕ್ಟೋಬರ್ 20ರ ತನಕ ಅವಕಾಶವನ್ನು ವಿಸ್ತರಣೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಇತ್ತಿಚೆಗಷ್ಟೇ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದ್ರು, HSRP ಅಳವಡಿಕೆಯ ಗಡುವನ್ನು ಮತ್ತಷ್ಟು ವಿಸ್ತರಿಸುವ ಯಾವುದೇ ನಿರ್ದೇಶನವನ್ನು ನೀಡಿಲ್ಲ.ವತಕ್ಷಣವೇ ದಂಡ ವಿಧಿಸುವ ಬದಲು, ವಾಹನ ಸವಾರರಿಗೆ ನಿಯಮವನ್ನು ಅನುಸರಿಸಲು ಇಲಾಖೆ 15 ದಿನಗಳ ಕಾಲಾವಕಾಶವನ್ನು ನೀಡಿದೆ. ಬಳಿಕ ಅಕ್ಟೋಬರ್ ಆರಂಭದಲ್ಲಿ ಇದನ್ನು ಜಾರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಸಾಕಷ್ಟು ಬಾರಿ ಗಡುವು ವಿಸ್ತರಣೆ ಮಾಡಿರುವ ಸರ್ಕಾರ ಅಕ್ಟೋಬರ್ 20ರ ಬಳಿಕ ಮತ್ತೆ ಕಾಲಾವಕಾಶ ನೀಡುವುದು ಅನುಮಾನವೇ ಸರಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾವೂ ಬೆಂಗಳೂರು ಬಿಟ್ಟರೆ ಖಾಲಿ.. ಖಾಲಿ.. ನಮ್ಮ ಬಗ್ಗೆ ಯೋಚನೆ ಮಾಡಿ ಮಾತಾಡಿ : ಕನ್ನಡಿಗರನ್ನು ಕೆರಳಿಸಿದ ಹೊರ ರಾಜ್ಯದ ಯುವತಿ..!

ಬೆಂಗಳೂರು: ಕರ್ನಾಟಕಕ್ಕೆ ಬಂದು ತಮ್ಮದೇ ಪಾರುಪತ್ಯ ಸಾಧಿಸುವ ಹೊರರಾಜ್ಯದವರು ಆಗಾಗ ನಾಲಿಗೆ ಹರಿ ಬಿಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಆಟೋ ಡ್ರೈವರ್ ವಿಚಾರದಲ್ಲಿ ಒಂದು ಘಟನೆ ನಡೆದಿದೆ. ಓಲಾ ಬುಕ್ಕಿಂಗ್ ಮಾಡಿ, ಕ್ಯಾನ್ಸಲ್ ಮಾಡಿದ ಕಾರಣಕ್ಕೆ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ

ಮೈಸೂರು ಸೆ 21: ಸುಳ್ಳಿ ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ. ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.‌ ಮೈಸೂರು ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್

ಸರ್ಕಾರಿ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ : ಎಷ್ಟು ದಿನ..? ಯಾವಾಗಿಂದ ಎಲ್ಲಾ ಮಾಹಿತಿ ಇಲ್ಲಿದೆ..!

ಬೆಂಗಳೂರು: ಶಾಲಾ ಮಕ್ಕಳು ದಸರಾ ರಜೆ ಯಾವಾಗ ಬರುತ್ತೆ ಅಂತ ಕಾಯ್ತಾ ಇರ್ತಾರೆ. 15-20 ದಿನಗಳ ಕಾಲ ರಜೆ ಸಿಕ್ಕರು ಕುಟುಂಬಸ್ಥರ ಜೊತೆಗೆ ಆರಾಮವಾಗಿ ಪ್ರವಾಸ, ನೆಂಟರಿಷ್ಟರ ಮನೆ ಅಂತ ಸುತ್ತಾಡಿಕೊಂಡು ಬರಬಹುದು ಎಂಬ

error: Content is protected !!