Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕದ್ದ ಹ್ಯುಬ್ಲೋ ವಾಚ್ ಆಗ ಸಿದ್ದು ಕೈಗೆ ಹೇಗೆ ಬಂತು..? : ಸಿ ಟಿ ರವಿ ಪ್ರಶ್ನೆ

Facebook
Twitter
Telegram
WhatsApp

ಚಿಕ್ಕಮಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರೋದು ಬಿಜೆಪಿನೆ. ತಾನೂ ಕಳ್ಳ ಪರರನ್ನು ನಂಬಿದ ಎಂಬುದು ಕಾಂಗ್ರೆಸ್ ಗೆ ಅನ್ವಯವಾಗುತ್ತದೆ. ಈ ಹಿಂದೆ ಸಿದ್ದರಾಮಯ್ಯ ಮೇಲೆ ಹ್ಯೂಬ್ಲೋ ವಾಚ್ ಪ್ರಕರಣ ಬಂತು. ಕಳ್ಳತನ, ಅಕ್ರಮದ ವಾಚ್. ಆದರೆ ಮುಖ್ಯಮಂತ್ರಿ ಕೈಗೆ ಹೇಗೆ ಬಂತು ಅನ್ನೋದು ಇನ್ನು ತನಿಖೆಯಾಗಲೇ ಇಲ್ಲ. ತಿಪ್ಪೆ ಸಾರಿಸುವ ಕೆಲಸ ಮಾಡಿದರು ಎಂದು ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ಏನಾದರೂ ಮಾಡಲಿ ನಮ್ಮ ವೋಟ್ ಬ್ಯಾಂಕ್ ಆಗಬೇಕು ಅಂತ ಕಾಂಗ್ರೆಸ್ ಮಾಡುತ್ತಿದೆ. ವೋಟ್ ಬ್ಯಾಂಕ್ ಹಿಂದೆ ಬಿದ್ದಿರೋ ಕಾಂಗ್ರೆಸ್ ನಡೆ ದೇಶಕ್ಕೆ ಅಪಾಯಕಾರಿ. ಕೋಮುಖ ವ್ಯಾಘ್ರಗಳ ರೀತಿಯಲ್ಲಿ ಒಳಗಿರುವವರು ತುಂಬಾ ಅಪಾಯಕಾರಿ. ಹೊರಗಡೆ ಶತ್ರುಗಳು ಕಣ್ಣಿಗೆ ಗೋಚರವಾಗುತ್ತಾರೆ. ಅದನ್ನು ನಿಗ್ರಹಿಸುವುದು ಕಷ್ಟವಲ್ಲ. ಆದರೆ ಒಳಗಡೆಯ ಶತ್ರುಗಳು ಹಾನಿ ಮಾಡುತ್ತಾರೆ ಅವರನ್ನು ನಿಗ್ರಹಿಸಬೇಕು ಅಂತ ಚಾಣುಕ್ಯ ಹೇಳುತ್ತಾನೆ. ಹೀಗಾಗಿ ಈ ದೇಶಕ್ಕೆ ಕಾಂಗ್ರೆಸ್ ಎಷ್ಟು ಅಪಾಯಕಾರಿ ಅನ್ನೋದು ಈ ಎಲ್ಲಾ ಘಟನೆಯಿಂದ ಗೊತ್ತಾಗುತ್ತೆ.

ಗಲಭೆ ಎಬ್ಬಿಸಿ ಸಂಚು ಮಾಡಿ, ಗಲಭೆಯಿಂದ ಗೋಲಿಬಾರ್ ಆದಾಗ ಇಡೀ ಕಾಂಗ್ರೆಸ್ ನವರು ವೈಧವ್ಯ ಪ್ರಾಪ್ತಿಯಾದವರಂತೆ ಆಡಿದಿರಿ. ಒಡೆಯುವುದರಲ್ಲೆ ಆಸಕ್ತಿ ಇರುವುದು, ಒಡೆಯುವವರಿಗೆ ಅವರ ಬೆಂಬಲವಿರುವುದು. ಇವತ್ತಿನ ಕಾಂಗ್ರೆಸ್ ನ ನೀತಿಯಾಗುದೆ, ಅದೇ ರೀತಿ ಅವರು ನಡೆದುಕೊಳ್ಳುತ್ತಿದ್ದಾರೆ. ಜಮೀರ್ ಅಹ್ಮದ್ ಸುದ್ದಿ ಕೇಳುತ್ತಿದ್ದರೆ ಅದಕ್ಕೆ ಪುಷ್ಟಿ ನೀಡುವಂತಿದೆ ಎಂದು ಜಮೀರ್ ಅಹ್ಮದ್ ಆರೋಪಿಗಳ ಕುಟುಂಬಕ್ಕೆ ಕಿಟ್ ನೀಡಿದರ ಬಗ್ಗೆ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ  ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ –

ಚಿತ್ರದುರ್ಗದಲ್ಲಿ‌ ಆರಂಭಗೊಂಡ ಮತದಾನ ಪ್ರಕ್ರಿಯೆ : ಬೆಳ್ಳಂಬೆಳಿಗ್ಗೆಯೇ ಸಾಲುಗಟ್ಟಿ ನಿಂತ ಮತದಾರರು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಚಿತ್ರದುರ್ಗ ನಗರದ ವಿಪಿ ಬಡಾವಣೆಯ

ಮತ ಚಲಾಯಿಸಲು ಯಾವ ದಾಖಲೆಗಳು ಬೇಕು ? ಇಲ್ಲಿದೆ ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ :  ಮತದಾನ ಮಾಡಲು ಮತದಾರನು ಎಪಿಕ್ (ಆಧಾರ್) ಕಾರ್ಡ್ ಇಲ್ಲವೆಂದು ಚಿಂತಿಸಬೇಕಿಲ್ಲಾ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಚುನಾವಣಾ ಆಯೋಗವು ಎಪಿಕ್ ಕಾರ್ಡ್ ಹೊರತುಪಡಿಸಿ 12

error: Content is protected !!